ಖಾರದ ಹುಡಿ ಎರಚಿ ಸರ ಎಗರಿಸಲು ಯತ್ನ; ಆರೋಪಿ ಪರಾರಿ

Prasthutha|

ಮಡಿಕೇರಿ: ಹಾಡಹಗಲೇ ವೃದ್ಧೆಯೊಬ್ಬರ ಚಿನ್ನದ ಸರ ಕದಿಯಲು ಯತ್ನಿಸಿರುವ ಘಟನೆ ಕೊಡಗಿನ ವಿರಾಜಪೇಟೆ ನಗರದಲ್ಲಿ ನಡೆದಿದೆ.

- Advertisement -

ಕಕ್ಕಟ್ಟೆ ಗ್ರಾಮದ ಕಾವೇರಮ್ಮ(65) ಅವರು ಕಳ್ಳನ ದಾಳಿಗೆ ಒಳಗಾದ ವೃದ್ಧ ಮಹಿಳೆ. ಕಾವೇರಮ್ಮ ಅವರು ಔಷಧಿ ಖರೀದಿಗಾಗಿ ನಿಂತಿದ್ದ ವೇಳೆ ಬುರ್ಖಾ ಧರಿಸಿ ಬಂದ ಕಳ್ಳ, ಕಣ್ಣಿಗೆ ಖಾರದ ಹುಡಿ ಎರಚಿ ಕತ್ತಿನಲ್ಲಿರುವ ಚಿನ್ನದ ಸರವನ್ನು ಅಪಹರಿಸಲು ಯತ್ನಿಸಿದ್ದಾನೆ.

ತನ್ನ ಕೈಯಲ್ಲಿದ್ದ ಕೊಡೆಯಿಂದ ಅಪಹರಣ ಮಾಡುವ ವ್ಯಕ್ತಿಯ ಮೇಲೆ ಪ್ರಹಾರ ಮಾಡಲು ಮುಂದಾದ ಕಾವೇರಮ್ಮ ಕಣ್ಣಿಗೆ ಖಾರದ ಹುಡಿ ಬಿದ್ದ ಪರಿಣಾಮ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ಕ್ಷಣ ಮಾತ್ರದಲ್ಲಿ ಕಳ್ಳ ಅಲ್ಲಿಂದ ಕಾಲ್ಕಿತ್ತಿದ್ದಾನೆ.

- Advertisement -

ಈ ಬಗ್ಗೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Join Whatsapp
Exit mobile version