Home ಟಾಪ್ ಸುದ್ದಿಗಳು ಹಣದ‌ ಬೇಡಿಕೆ ಇಟ್ಟ ಮೂವರು ನಕಲಿ ಎಸಿಬಿ ಅಧಿಕಾರಿಗಳ ಬಂಧನ

ಹಣದ‌ ಬೇಡಿಕೆ ಇಟ್ಟ ಮೂವರು ನಕಲಿ ಎಸಿಬಿ ಅಧಿಕಾರಿಗಳ ಬಂಧನ

ಕೋಲಾರ: ಹಣದ‌ ಬೇಡಿಕೆ ಇಟ್ಟಿದ್ದ‌ ಮೂವರು ನಕಲಿ ಎಸಿಬಿ ಅಧಿಕಾರಿಗಳನ್ನು ಕೋಲಾರ ಗ್ರಾಮಾಂತರ ‌ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯ ಮುರಿಗಪ್ಪ, ಹಾಸನ ಜಿಲ್ಲೆ ಸಕಲೇಶಪುರದ ರಜನಿಕಾಂತ್ ಹಾಗೂ ಮಹಾರಾಷ್ಟ್ರದ ರಾಜೇಶ್ ಬಂಧಿತ ಆರೋಪಿಗಳಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಎಸಿಬಿ ಅಧಿಕಾರಿಗಳ ಸೋಗಿನಲ್ಲಿ ಈ ಮೂವರು ಕೋಲಾರದ ನಿರ್ಮಿತಿ ಕೇಂದ್ರದ ಯೋಜನಾ‌ ಅಧಿಕಾರಿ ನಾರಾಯಣಗೌಡ ಅವರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅನುಮಾನಗೊಂಡ ನಾರಾಯಣಗೌಡ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಈ ಮೂವರು ಆರೋಪಿಗಳ ವಿರುದ್ಧ ಇಂಥದ್ದೇ ಹಲವು ಪ್ರಕರಣಗಳು ವಿವಿಧೆಡೆ ದಾಖಲಾಗಿವೆ ಎನ್ನಲಾಗಿದೆ.

ವಿಚಾರಣೆ ವೇಳೆ ಪೊಲೀಸರಿಗೇ ಸವಾಲೆಸೆದಿರುವ ಆರೋಪಿಗಳು, ‘ನಮ್ಮನ್ನೇಕೆ ಆತಂಕವಾದಿಗಳಂತೆ ಕಾಣುತ್ತಿದ್ದೀರಿ? ಭ್ರಷ್ಟಾಚಾರ ಮಾಡಿ ದೇಶವನ್ನೇ  ಹಾಳು ಮಾಡುತ್ತಿರುವವರನ್ನು ಸುಮ್ಮನೇ ಬಿಟ್ಟಿದ್ದೀರಿ.  ಭ್ರಷ್ಟಾಚಾರ ಬಯಲಿಗೆಳೆವುದು ನಮ್ಮ ಉದ್ದೇಶವಾಗಿತ್ತು’ ಎಂದು  ಹೇಳಿದ್ದಾರೆ.

Join Whatsapp
Exit mobile version