‘ಇದು ತಪ್ಪು’: ಬಿಲ್ಕೀಸ್ ಬಾನು ಅತ್ಯಾಚಾರಿಗಳಿಗೆ ಸನ್ಮಾನ ಟೀಕಿಸಿದ ದೇವೇಂದ್ರ ಫಡ್ನವಿಸ್

Prasthutha|

ಮುಂಬೈ: ಜೈಲಿನಿಂದ ಬಿಡುಗಡೆಗೊಂಡ ಬಿಲ್ಕೀಸ್ ಬಾನು ಅತ್ಯಾಚಾರಿಗಳಿಗೆ ಹೂ ಹಾರ ಹಾಕಿ ಸ್ವಾಗತ ನೀಡಿರುವುದನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕಟುವಾಗಿ ಟೀಕಿಸಿದ್ದು, ಇದು ತಪ್ಪು ಎಂದು ಹೇಳಿದ್ದಾರೆ.

- Advertisement -

ಆರೋಪಿಗಳು ಆರೋಪಿಗಳೇ. ಅವರಿಗೆ ಮಾಡಿರುವ ಸನ್ಮಾನವನ್ನು ಯಾವುದೇ ಕಾರಣಕ್ಕೂ ಸಮರ್ಥಿಸುವುದಿಲ್ಲ ಎಂದು ದೇವೇಂದ್ರ ಫಡ್ನವೀಸ್ ಹೇಳಿದರು.

“2002 ರಲ್ಲಿ ಗುಜರಾತ್‌ನಲ್ಲಿ ನಡೆದ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ಆದೇಶದ ನಂತರ ಬಿಡುಗಡೆ ಮಾಡಲಾಯಿತು. ಆದರೆ ಅಪರಾಧದ ಆರೋಪ ಹೊತ್ತಿರುವ ವ್ಯಕ್ತಿಯನ್ನು ಸನ್ಮಾನಿಸಿದರೆ ಅದು ತಪ್ಪಾಗಿದೆ ಮತ್ತು ಅಂತಹ ಕೃತ್ಯಕ್ಕೆ ಯಾವುದೇ ಸಮರ್ಥನೆ ಇಲ್ಲ” ಎಂದು ಫಡ್ನವಿಸ್ ಹೇಳಿದ್ದಾರೆ.

Join Whatsapp
Exit mobile version