ನಮಾಝ್ ಮಾಡಿದಾಗ ಸಿಗುವ ನೆಮ್ಮದಿ, ಶತಕ ಸಿಡಿಸಿದಾಗಲೂ ಸಿಗಲ್ಲ: ಭಾರತದ ಯುವ ಆಟಗಾರ ಸಮೀರ್​ ರಿಝ್ವಿ

Prasthutha|

- Advertisement -

ಲಖನೌ: ನಮಾಜ್​ ಮಾಡಿದಾಗ ಸಿಗುವ ನೆಮ್ಮದಿ, ಶತಕ ಗಳಿಸಿದಾಗಲೂ ಸಿಗಲ್ಲ ಎಂದು ಭಾರತದ ಯುವ ಆಟಗಾರ ಸಮೀರ್​ ರಿಝ್ವಿ ಹೇಳಿದ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

17ನೇ ಆವೃತ್ತಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ಕಿಂಗ್ಸ್​ ಪರ ಆಡಿದ್ದ ಸಮೀರ್​ ರಿಝ್ವಿ ಹರಾಜಿನ ವೇಳೆ 8.4 ಕೋಟಿ ರೂಪಾಯಿಗೆ ಬಿಕರಿಯಾಗುವ ಮೂಲಕ ಸುದ್ದಿಯಾಗಿದ್ದರು.

- Advertisement -

ಉತ್ತರಪ್ರದೇಶದ ಮೀರತ್​ ಮೂಲದ 20 ವರ್ಷದ ಯುವ ಬ್ಯಾಟ್ಸ್​ ಮನ್​ ಸಮೀರ್​ ಸದ್ಯ ಯುಪಿ ಟಿ20 ಲೀಗ್‌ನಲ್ಲಿ ಆಡುತ್ತಿದ್ದಾರೆ. ಪ್ರಸ್ತುತ ಯುಪಿ ಲೀಗ್​ನಲ್ಲಿ ಸ್ಫೋಟಕ ಆಟದೊಂದಿಗೆ ಎಲ್ಲರ ಗಮನ ಸೆಳೆದಿರುವ ಸಮೀರ್​ ಇದೀಗ ತಮ್ಮ ಹೇಳಿಕೆಯೊಂದರ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಅವರು,
ನಾನೊಬ್ಬ ಧಾರ್ಮಿಕ ವ್ಯಕ್ತಿಯಾಗಿದ್ದು, ಪ್ರತಿದಿನ ತಪ್ಪದೇ ನಮಾಜ್ ಮಾಡುತ್ತೇನೆ. ನಮಾಜ್​ ಪಠಣೆ ಮಾಡುವುದರಿಂದ ಸಿಗುವ ಶಾಂತಿ-ನೆಮ್ಮದಿ, ಶತಕ ಸಿಡಿಸಿದಾಗಲೂ ಸಿಗುವುದಿಲ್ಲ ಎಂದಿದ್ದಾರೆ.

ಎಂತಹ ಒತ್ತಡದ ಪರಿಸ್ಥಿತಿಯಿದ್ದರೂ ಶಾಂತವಾಗಿರಬೇಕು ಎನ್ನುವುದನ್ನು ನನಗೆ ಧೋನಿ ಅವರು ಕಲಿಸಿಕೊಟ್ಟಿದ್ದಾರೆ. ನನಗೆ ಕ್ರಿಕೆಟ್ ಲೆಜೆಂಡ್‌ ಗಳಾದ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಎಂದರೆ ಅಚ್ಚುಮೆಚ್ಚು. ಅವರೇ ನನಗೆ ಕ್ರಿಕೆಟ್​ ಆಡಲು ಸ್ಫೂರ್ತಿ ಎಂದು ಹೇಳಿದ್ದಾರೆ.

ನಾನು ಐಪಿಎಲ್​ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​​ಗೆ ಆಯ್ಕೆಯಾದ ಬಳಿಕ ತಂಡವು ನನ್ನನ್ನು ಸ್ವಾಗತಿಸಿದ ರೀತಿ ಅದ್ಭುತವಾಗಿತ್ತು. ಮುಂದೆಯೂ ಅವಕಾಶ ಸಿಕ್ಕಿದರೆ ತಾವು ಚೆನ್ನೈ ಸೂಪರ್ ಕಿಂಗ್ಸ್‌ ಪರ ಆಡುತ್ತೇನೆ ಎಂದು ಹೇಳಿದ್ದಾರೆ.



Join Whatsapp
Exit mobile version