Home ಟಾಪ್ ಸುದ್ದಿಗಳು ಮಳೆ-ಗಾಳಿಗೆ ನಿಯಂತ್ರಣ ತಪ್ಪಿದ ಕಾರು ಹೇಮಾವತಿ ನದಿ ದಡಕ್ಕೆ…!

ಮಳೆ-ಗಾಳಿಗೆ ನಿಯಂತ್ರಣ ತಪ್ಪಿದ ಕಾರು ಹೇಮಾವತಿ ನದಿ ದಡಕ್ಕೆ…!

ಮೂಡಿಗೆರೆ: ಮಳೆ-ಗಾಳಿಗೆ ಕಾರು ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ನದಿಯ ದಡಕ್ಕೆ ಹೋಗಿ ನಿಂತ ಘಟನೆ ತಾಲೂಕಿನ ಬಣಕಲ್ ಸಮೀಪ ಸೋಮವಾರ ನಡೆದಿದೆ.

ಕೊಟ್ಟಿಗೆಹಾರದಿಂದ ಮೂಡಿಗೆರೆಗೆ ಹೋಗುತ್ತಿದ್ದ ಬಿಜೆಪಿ ಮುಖಂಡ ತರುವೆ ಆದರ್ಶ್ ರಾಷ್ಟ್ರೀಯ ಹೆದ್ದಾರಿ 173ರ ತಿರುವಿನಲ್ಲಿ ಮಳೆ ಹಾಗೂ ಗಾಳಿಗೆ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.ಕಾರು ಮತ್ತಷ್ಟು ಸ್ವಲ್ಪ ಮುಂದೆ ಹೋಗಿದ್ದರೆ ನದಿಯಲ್ಲಿ ಮುಳುಗುತ್ತಿತ್ತು. ಅದೃಷ್ಟವಶಾತ್ ಕಾರಿನ ಚಾಲಕ ಆದರ್ಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಲೆನಾಡಿನಲ್ಲಿ ಗಾಳಿ-ಮಳೆಯ  ಅಬ್ಬರ ಮುಂದುವರೆದಿದ್ದು ಚಾರ್ಮಾಡಿ ಘಾಟಿಯಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ. ಒಂದು ಕಾರಿನಲ್ಲಿ ನಾಲ್ವರು, ಮತ್ತೊಂದು ಕಾರಿನಲ್ಲಿ ಇಬ್ಬರು ಇದ್ದು ಯಾವುದೇ ಅನಾಹುತ ಸಂಭವಿಸಿಲ್ಲ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version