Home ಟಾಪ್ ಸುದ್ದಿಗಳು ಠಾಣೆಗೆ ಕರೆದೊಯ್ದು ‌ವಿಚಾರಣೆ, ನೊಂದ ಮಹಿಳೆ ನೇಣಿಗೆ ಶರಣು

ಠಾಣೆಗೆ ಕರೆದೊಯ್ದು ‌ವಿಚಾರಣೆ, ನೊಂದ ಮಹಿಳೆ ನೇಣಿಗೆ ಶರಣು

ಬೆಂಗಳೂರು: ಪೊಲೀಸರ ಕಿರುಕುಳ ಹಾಗೂ ನೆರೆಹೊರೆಯವರ ಚುಚ್ಚು ಮಾತಿನಿಂದ ನೊಂದ ಗೃಹಿಣಿ ನೇಣಿಗೆ ಶರಣಾಗಿರುವ ದಾರುಣ ಘಟನೆ ನೆಲಮಂಗಲದ ಮಾರುತಿ ನಗರದಲ್ಲಿ ನಡೆದಿದೆ.

ಮಾರುತಿನಗರದ ಅಖಿಲಾ (35) ನೇಣಿಗೆ ಶರಣಾದವರು.ಆತ್ಮಹತ್ಯೆಗೂ ಮುನ್ನ ಮಹಿಳೆಯು ಸಾಲದ ಹಣಕ್ಕಾಗಿ ಚಂದನ್ ಎಂಬಾತ ಕೊಡುತ್ತಿದ್ದ ಕಾಟ ಹಾಗೂ ನೆರೆಹೊರೆಯವರ ಚುಚ್ಚು ಮಾತಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್​ನೋಟ್ ಬರೆದಿಟ್ಟಿದ್ದಾರೆ.

ಮೃತ ಅಖಿಲಾ ಪತಿ ಮಧುಸೂಧನ್ ಅವರು ಸ್ಥಳೀಯ ನಿವಾಸಿ ಚಂದನ್ ಅಲಿಯಾಸ್ ಚನ್ನಕೇಶವ ಬಳಿ 1 ಲಕ್ಷ ರೂ. ಸಾಲ ಪಡೆದಿದ್ದರಂತೆ. ಚಂದನ್ ಸಾಲದ ಹಣ ವಾಪಸ್ ನೀಡುವಂತೆ ಪ್ರತಿನಿತ್ಯ ಪೊಲೀಸರ ಮೂಲಕ ಕಾಟ ಕೊಡಿಸುತ್ತಿದ್ದ.

ಮಧುಸೂಧನ್ ಇಲ್ಲದ ವೇಳೆ ಮನೆಗೆ ಬಂದ ಪೊಲೀಸರು, ಅಖಿಲಾರನ್ನು ಪೊಲೀಸ್ ಜೀಪ್​ನಲ್ಲಿ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದರು. ಮಹಿಳೆ ಠಾಣೆಯಿಂದ ವಾಪಸ್ ಬಂದ ನಂತರ ನೆರೆಹೊರೆಯವರ ಚುಚ್ಚು ಮಾತಿಗೆ ಬೇಸತ್ತು ನೇಣಿಗೆ ಶರಣಾಗಿದ್ದಾರೆ. ಈ ಕುರಿತು ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version