Home ಟಾಪ್ ಸುದ್ದಿಗಳು ಸುರತ್ಕಲ್: ರಸ್ತೆ ದುರಸ್ತಿಗೆ ಆಗ್ರಹಿಸಿ ಹಾಕಿದ್ದ ಬ್ಯಾನರ್ ಕಳವು

ಸುರತ್ಕಲ್: ರಸ್ತೆ ದುರಸ್ತಿಗೆ ಆಗ್ರಹಿಸಿ ಹಾಕಿದ್ದ ಬ್ಯಾನರ್ ಕಳವು

ಪೊಲೀಸರಿಗೆ ದೂರು ನೀಡಲು SDPI ಚಿಂತನೆ

ಸುರತ್ಕಲ್: ರೈಲ್ವೇ ಮೇಲ್ಸೇತುವೆಯ ರಸ್ತೆ ದುರಸ್ತಿಗೆ ಆಗ್ರಹಿಸಿ ಎಸ್‌ಡಿಪಿಐ ಅಳವಡಿಸಿದ್ದ ಪ್ಲೆಕ್ಸ್‌ನ್ನು ಕಿಡಿಗೇಡಿಗಳು ಕಳವು ಮಾಡಿದ್ದಾರೆ ಎಂದು ವರದಿಯಾಗಿದೆ.

ಸುರತ್ಕಲ್ ಚೊಕ್ಕಬೆಟ್ಟು ಕ್ರಾಸ್‌ ಬಳಿಯ ರೈಲ್ವೇ ಮೇಲ್ವೇತುವೆ ಮಳೆಗಾಲಕ್ಕೂ ಮುನ್ನವೇ ದುರಸ್ತಿಗೊಂಡಿದೆ. ಇದನ್ನು ದುರಸ್ತಿಗೊಳಿಸುವಂತೆ ಹಲವಾರು ಬಾರಿ ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದೆವು. ಆದರೆ, ಯಾವೊಬ್ಬರೂ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸಿಲ್ಲ.

ಈ ಕಾರಣಕ್ಕಾಗಿ ಎಸ್ ಡಿಪಿಐ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ವಾರದೊಳಗೆ ರಸ್ತೆ ದುರಸ್ತಿ ಕಾರ್ಯ ನಡೆಸದಿದ್ದರೆ ಸೆ.4ರಂದು ಸಾರ್ವಜನಿಕರ ಜೊತೆಗೂಡಿಸಿಕೊಂಡು ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ಆ.27ರಂದು ಬೆಳಗ್ಗೆ ಪ್ಲೆಕ್ಸ್ ಅಳವಡಿಸಿತ್ತು.

ಈ ಮಧ್ಯೆ ಕಿಡಿಗೇಡಿಗಳು ಅಳವಡಿಸಿದ್ದ ಬ್ಯಾನರ್‌ನ್ನು ಸಂಜೆಯ ವೇಳೆ ಕಳವುಗೈದು ಪರಾರಿಯಾಗಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಎಸ್.ಡಿ.ಪಿ.ಐ. ಸುರತ್ಕಲ್ ಬ್ಲಾಕ್ ಅಧ್ಯಕ್ಷ ನೌಶಾದ್ ಚೊಕ್ಕಬೆಟ್ಟು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version