Home ಟಾಪ್ ಸುದ್ದಿಗಳು ಒಂದೆಡೆ ಗೋಡ್ಸೆಯ ವೈಭವೀಕರಣ, ಮತ್ತೊಂದೆಡೆ ಗಾಂಧಿ ಆಶ್ರಮಕ್ಕೆ ಭೇಟಿ: ಬಿಜೆಪಿ ವಿರುದ್ಧ ಶಿವಸೇನೆ ವಾಗ್ದಾಳಿ

ಒಂದೆಡೆ ಗೋಡ್ಸೆಯ ವೈಭವೀಕರಣ, ಮತ್ತೊಂದೆಡೆ ಗಾಂಧಿ ಆಶ್ರಮಕ್ಕೆ ಭೇಟಿ: ಬಿಜೆಪಿ ವಿರುದ್ಧ ಶಿವಸೇನೆ ವಾಗ್ದಾಳಿ

ಮುಂಬೈ: ತನ್ನ ಮುಖವಾಣಿ ಸಾಮ್ನಾದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ, ಒಂದು ಕಡೆ ಗೋಡ್ಸೆಯನ್ನು ಬಿಜೆಪಿ ವೈಭವೀಕರಿಸುತ್ತದೆ. ಮತ್ತೊಂದೆಡೆ ಭಾರತ ಪ್ರವಾಸದಲ್ಲಿರುವ ವಿದೇಶಿ ಗಣ್ಯರನ್ನು ಸಾಬರಮತಿ ಆಶ್ರಮಕ್ಕೆ ಕರೆದೊಯ್ಯುತ್ತದೆ ಎಂದು ಕುಟುಕಿದೆ.

ಬಿಜೆಪಿ, ಮಹಾತ್ಮ ಗಾಂಧಿಯನ್ನು ಜಾಗತಿಕವಾಗಿ ಭಾರತದ ಗುರುತು ಎಂದು ಪ್ರತಿಪಾದಿಸಿ ನಾಟಕವಾಡುತ್ತಿದೆ ಎಂದು ಅದು ಆರೋಪಿಸಿದೆ.

ಬಿಜೆಪಿಯವರು ನಾಥುರಾಮ್ ಗೋಡ್ಸೆಯ ಸಿದ್ಧಾಂತವನ್ನು ಬೆಂಬಲಿಸುತ್ತಾರೆ. ವಿದೇಶಿ ಅತಿಥಿಗಳು ಬಂದಾಗ ನೂಲು ನೇಯಲು ಅವರನ್ನು ಗಾಂಧಿಯ ಸಾಬರಮತಿ ಆಶ್ರಮಕ್ಕೆ ಕರೆದೊಯ್ಯುತ್ತಾರೆ ಎಂದು ಸಾಮ್ನಾದ ಸಂಪಾದಕೀಯದಲ್ಲಿ ವ್ಯಂಗ್ಯವಾಡಿದೆ.

ಗುಜರಾತಿನಲ್ಲಿ ಐಕ್ಯತೆಯ ಪ್ರತಿಮೆ ಇದ್ದರೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ವಿದೇಶಿ ಗಣ್ಯರನ್ನು ಮಹಾತ್ಮ ಗಾಂಧಿಯನ್ನು ಭಾರತದ ಗುರುತು ಎಂಬ ನೆಲೆಯಲ್ಲಿ ಸಾಬರಮತಿ ಆಶ್ರಮಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಸಾಮ್ನಾ, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

Join Whatsapp
Exit mobile version