Home ಟಾಪ್ ಸುದ್ದಿಗಳು RSS ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣ| ನಾಲ್ವರು RSS ಕಾರ್ಯಕರ್ತರ ಬಂಧನ

RSS ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣ| ನಾಲ್ವರು RSS ಕಾರ್ಯಕರ್ತರ ಬಂಧನ

ತಿರುವನಂತಪುರ: RSS ಕಾರ್ಯಕರ್ತ ಪ್ರಕಾಶನ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು RSS ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಆರೆಸ್ಸೆಸ್ ಕಾರ್ಯಕರ್ತರಾದ ರಾಜೇಶ್, ಶ್ರೀಕುಮಾರ್, ಕೃಷ್ಣಕುಮಾರ್ ಮತ್ತು ಸತಿಕುಮಾರ್ ಎಂದು ಗುರುತಿಸಲಾಗಿದೆ.

ಕೇರಳದ ಸ್ವಾಮಿ ಸಂದೀಪಾನಂದಗಿರಿ ಆಶ್ರಮಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕುಂದಮಾನ್‌ ಕಡವ್‌ ಮೂಲದ ಪ್ರಕಾಶನ್‌ ಆರೋಪಿಯಾಗಿದ್ದು, ಆರೆಸ್ಸೆಸ್ ಕಾರ್ಯಕರ್ತರ ದೌರ್ಜನ್ಯದಿಂದ ಮನನೊಂದು ಪ್ರಕಾಶನ್ ಆತ್ಮಹತ್ಯೆ ಮಾಡಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version