Home ಕರಾವಳಿ ಉಡುಪಿ: ಪ್ರವಾಸಕ್ಕೆಂದು ಬಂದಿದ್ದ ಮುಸ್ಲಿಮ್ ಕುಟುಂಬದ ಮೇಲೆ ಶ್ರೀರಾಮ ಸೇನೆ ಗೂಂಡಾಗಿರಿ

ಉಡುಪಿ: ಪ್ರವಾಸಕ್ಕೆಂದು ಬಂದಿದ್ದ ಮುಸ್ಲಿಮ್ ಕುಟುಂಬದ ಮೇಲೆ ಶ್ರೀರಾಮ ಸೇನೆ ಗೂಂಡಾಗಿರಿ

ಉಡುಪಿ: ಪ್ರವಾಸಕ್ಕೆಂದು ಉಡುಪಿಯ ಹೆಬ್ರಿಗೆ ಬಂದಿದ್ದ ಮುಸ್ಲಿಮ್ ಕುಟುಂಬದ ಸದಸ್ಯರ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ದಾಂಧಲೆ ನಡೆಸಿರುವ ಘಟನೆ ನಡೆದಿದೆ.


ಮುಸ್ಲಿಮ್ ಕುಟುಂಬವೊಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ರವಾಸಕ್ಕೆ ಆಗಮಿಸಿತ್ತು. ಪ್ರವಾಸಿಗರು ಹೆಬ್ರಿ ಸಮೀಪದ ಸೋಮೇಶ್ವರ ಸೀತಾನದಿ ತಡದಲ್ಲಿ ವಾಹನ ನಿಲ್ಲಿಸಿ ಊಟ ಮಾಡುತ್ತಿದ್ದ ವೇಳೆ, ಶ್ರೀರಾಮ ಸೇನೆ ಕಾರ್ಯಕರ್ತರು ಆಗಮಿಸಿ, ಇಲ್ಲಿ ಸಮೀಪದಲ್ಲೇ ನಾಗಬನ ಇದೆ, ನೀವು ಮಾಂಸಾಹಾರ ಸೇವಿಸಿದ್ದೀರಿ ಎಂದು ಆರೋಪಿಸಿ ಕುಟುಂಬದ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. ಈ ಕುರಿತ ವೀಡಿಯೋ ವೈರಲ್ ಆಗಿದೆ.

ಉಡುಪಿ : ಪ್ರವಾಸಕ್ಕೆ ಬಂದಿದ್ದ ಮುಸ್ಲಿಮ್ ಕುಟುಂಬದ ಮೇಲೆ ಶ್ರೀರಾಮ ಸೇನೆಯಿಂದ ಗೂಂಡಾಗಿರಿ !


ಪ್ರವಾಸಿಗರನ್ನು ಬೆದರಿಸಿರುವ ರಾಮಸೇನೆಯ ಕಾರ್ಯಕರ್ತರಾದ ಹರೀಶ್ ಪೂಜಾರಿ ಮಣಿಪಾಲ ಮತ್ತು ಅವಿನಾಶ್ ಪೂಜಾರಿ, ನಾಗಬನ ಮತ್ತು ಮಂದಿರದ ಪಾವಿತ್ರತೆ ಹಾಳುಮಾಡುತ್ತಿದ್ದೀರಿ ಎಂದು ಆರೋಪಿಸಿ ಸ್ಥಳದಿಂದ ತೆರಳುವಂತೆ ತಾಕೀತು ಮಾಡಿದ್ದಾರೆ.

Join Whatsapp
Exit mobile version