Home ಟಾಪ್ ಸುದ್ದಿಗಳು ಸ್ಪೀಕರ್ ಯು.ಟಿ. ಖಾದರ್’ರನ್ನು ಭೇಟಿಯಾದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ನಿಯೋಗ

ಸ್ಪೀಕರ್ ಯು.ಟಿ. ಖಾದರ್’ರನ್ನು ಭೇಟಿಯಾದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ನಿಯೋಗ

ಕೋವಿಡ್ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುವ ವೇಳೆ ಮೃತ ಪಟ್ಟ ನೌಕರರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಮನವಿ

ಮಂಗಳೂರು: ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಯುಟಿ ಖಾದರ್ ರವರನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದ ನಿಯೋಗ ಮಂಗಳೂರಿನ  ಪಿಡಬ್ಲ್ಯೂ ಗೆಸ್ಟ್ ಹೌಸ್ ಕಚೇರಿಯಲ್ಲಿ ಭೇಟಿ ಮಾಡಿತು.

ಕೋವಿಡ್ ಸಂಧರ್ಭದಲ್ಲಿ ಕಾರ್ಯ ನಿರ್ವಹಿಸುವ ವೇಳೆ ಮೃತ ಪಟ್ಟ ನೌಕರರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಅವರಲ್ಲಿ ಚರ್ಚಿಸಲಾಯಿತು. ನಮ್ಮ ಮನವಿಗೆ ಸ್ಪಂದಿಸಿದ ಸಭಾಪತಿಗಳು ತಕ್ಷಣ  ಸಂಬಂಧ ಪಟ್ಟ ಸಾರಿಗೆ ಅಧಿಕಾರಿಗಳಿಗೆ ಸ್ಥಳದಲ್ಲೇ ದೂರವಾಣಿ ಕರೆ ಮೂಲಕ ಸಮಸ್ಯೆ ಕುರಿತು ವಿಚಾರಿಸಿದರು, ಹಾಗೂ ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಭಂದ ಪಟ್ಟ ಸಚಿವರಿಗೂ ಪತ್ರ ಬರೆಯುವ ಆಶ್ವಾಸನೆ ನೀಡಿದರು.

ಈ ನಿಯೋಗದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಅಡ್ವೋಕೇಟ್ ತಾಹೇರ್ ಹುಸೇನ್, ರಾಜ್ಯ ಉಪಾಧ್ಯಕ್ಷರಾದ ಶ್ರೀಕಾಂತ್ ಸಾಲಿಯಾನ್ ಹಾಗೂ ಮುಜಾಹಿದ್ ಪಾಶಾ ಖುರೇಷಿ, ರಾಜ್ಯ ಕಾರ್ಯದರ್ಶಿ ಕೆ ಟಿ ಬಶೀರ್, ರಾಜ್ಯ ಖಜಾಂಚಿ ಸಿ ಹೆಚ್ ಸಲಾಂ, ಮಾಧ್ಯಮ ಸಂಚಾಲಕ ರಿಜ್ವಾನ್ ತಾಜ್, ಮಂಗಳೂರು ಜಿಲ್ಲಾ ಕಾರ್ಯದರ್ಶಿ ಸೈಫ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Join Whatsapp
Exit mobile version