Home ಕರಾವಳಿ ಉತ್ತಮವಾಗಿ ಮಾತನಾಡಿ : ಎಸ್ ಡಿಪಿಐನಿಂದ ಕಾರ್ಯಾಗಾರ

ಉತ್ತಮವಾಗಿ ಮಾತನಾಡಿ : ಎಸ್ ಡಿಪಿಐನಿಂದ ಕಾರ್ಯಾಗಾರ

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಎಸ್ ಡಿಪಿಐ ವತಿಯಿಂದ ಒಂದು ದಿನದ ಭಾಷಣ ಕಾರ್ಯಾಗಾರ ಮಂಗಳೂರಿನ SDPI ಕಚೇರಿಯ ಕಾನ್ಫರೆನ್ಸ್ ಹಾಲ್ ನಲ್ಲಿ ನೆರವೇರಿತು.

SDPI ಕರ್ನಾಟಕದ Department of Education And Training ಅಡಿಯಲ್ಲಿ ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಭಾಷಣ ಮತ್ತು ತರಗತಿಗಳನ್ನು ನಡೆಸುವುದು ಹೇಗೆ ಮತ್ತು ಅವು ಹೇಗಿರಬೇಕು ಎಂಬುದರ ಬಗ್ಗೆ SDPI ರಾಷ್ಟ್ರೀಯ ಮಟ್ಟದ ತರಬೇತುದಾರ ಫಯಾಝ್ ದೊಡ್ಡ ಮನೆ ವಿವರ ನೀಡಿದರು.

ಮಾಧ್ಯಮಗಳಿಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು SDPI ರಾಜ್ಯ ಮಾಧ್ಯಮ ಉಸ್ತುವಾರಿ ರಿಯಾಝ್ ಕಡಂಬು ತರಬೇತಿ ನೀಡಿದರು. ಕಾರ್ಯಾಗಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಸ್ ಡಿಪಿಐನ D.E.T ಉಸ್ತುವಾರಿ ಶಾಫಿ ಬೆಳ್ಳಾರೆ ಅವರು ಕಾರ್ಯಾಗಾರದ ಸಮಾರೋಪ ಭಾಷಣ ಮಾಡಿದರು. SDPI ರಾಜ್ಯ ಸಮಿತಿ ಸದಸ್ಯ ಅಕ್ಬರ್ ಅಲಿ, ಜಿಲ್ಲಾ ಕಾರ್ಯದರ್ಶಿಗಳಾದ ಶಾಕೀರ್ ಅಳಕೆ ಮಜಲು, ಅಕ್ಬರ್ ಬೆಳ್ತಂಗಡಿ, ಜಿಲ್ಲಾ ನಾಯಕ ಯೂಸುಫ್ ಆಲಡ್ಕ ಉಪಸ್ಥಿತರಿದ್ದರು.  ಕಾರ್ಯಾಗಾರದಲ್ಲಿ ಒಟ್ಟು 35 ತಳಮಟ್ಟದ ನಾಯಕರು ಭಾಗವಹಿಸಿದ್ದರು.

Join Whatsapp
Exit mobile version