Home ಟಾಪ್ ಸುದ್ದಿಗಳು ಮೋದಿಯನ್ನು ಟೀಕಿಸಬಾರದೆಂಬ ಯಡಿಯೂರಪ್ಪನವರ ಹೇಳಿಕೆಗೆ  ತಿರುಗೇಟು ನೀಡಿದ ಸಿದ್ದರಾಮಯ್ಯ

ಮೋದಿಯನ್ನು ಟೀಕಿಸಬಾರದೆಂಬ ಯಡಿಯೂರಪ್ಪನವರ ಹೇಳಿಕೆಗೆ  ತಿರುಗೇಟು ನೀಡಿದ ಸಿದ್ದರಾಮಯ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಬಾರದು ಎಂದು ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಯಡಿಯೂರಪ್ಪನವರು ಇತ್ತೀಚೆಗೆ ಜನಸಂಕಲ್ಪ ಯಾತ್ರೆಯೊಂದರಲ್ಲಿ ಮೋದಿಯವರನ್ನು ಟೀಕಿಸುವವರ ವಿರುದ್ಧ  ಆ ಕ್ಷಣದಲ್ಲೇ   ಪ್ರತಿಭಟಿಸಿ ಎಂದು ಕಾರ್ಯಕರ್ತರಿಗೆ  ಆಜ್ಞೆ ಹೊರಡಿಸುವ ಧ್ವನಿಯಲ್ಲಿ ಹೇಳಿರುವ ಯಡಿಯೂರಪ್ಪನವರಿಗೆ ವಿರೋಧ ಪಕ್ಷದ ನಾಯಕನಾದ ನಾನು ಕೆಲವೊಂದು ಪ್ರಶ್ನೆಗಳನ್ನು ಕೇಳಬಯಸುತ್ತೇನೆ.

ಯಡಿಯೂರಪ್ಪನವರು ಉತ್ತರವನ್ನು ಲಿಖಿತ ಅಥವಾ ಬಹಿರಂಗ ಚರ್ಚೆಗೆ ಬರುವುದರ ಮೂಲಕ ನೀಡಿದರೆ, ಆ ಉತ್ತರಗಳು ರಾಜ್ಯದ ಜನರಿಗಿರಲಿ, ಬಿಜೆಪಿ ಕಾರ್ಯಕರ್ತರಿಗಾದರೂ ಸಮಾಧಾನ ತಂದರೆ, ಅದರ ನಂತರ ಮೋದಿಯವರು ಟೀಕೆ-ವಿಮರ್ಶೆಗೆ ಅರ್ಹರೋ ಅಥವಾ ವಿಮರ್ಶಾತೀತರೊ ಎಂಬುದನ್ನು ರಾಜ್ಯದ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

Join Whatsapp
Exit mobile version