Home Uncategorized ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಆರೋಪಿ ಸಂಪತ್ ರಾಜ್ ನನ್ನು ರಕ್ಷಿಸುತ್ತಿರುವ ಡಿ.ಕೆ.ಶಿವಕುಮಾರ್: ಶಾಸಕ...

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಆರೋಪಿ ಸಂಪತ್ ರಾಜ್ ನನ್ನು ರಕ್ಷಿಸುತ್ತಿರುವ ಡಿ.ಕೆ.ಶಿವಕುಮಾರ್: ಶಾಸಕ ಅಖಂಡ ಶ್ರೀನಿವಾಸ್ ಟೀಕೆ

ಬೆಂಗಳೂರು:  ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ ಪ್ರಮುಖ ಆರೋಪಿಗಳಾದ ಕಾಂಗ್ರೆಸ್ ಮೇಯರ್ ಆರ್.ಸಂಪತ್ ರಾಜ್ ಮತ್ತು ಕಾರ್ಪೊರೇಟರ್ ಅಬ್ದುಲ್ ರಕೀಬ್ ಝಾಕೀರ್ ರನ್ನು ತಕ್ಷಣವೇ ಪಕ್ಷದಿಂದ ಉಚ್ಛಾಟಿಸಬೇಕೆಂದು ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಆಗ್ರಹಿಸಿದ್ದಾರೆ.

ಆಗಸ್ಟ್ 11ರಂದು ನಡೆದ ಗಲಭೆಯ ವೇಳೆ ತನ್ನ ಮನೆಗೆ ದಾಳಿ ಮಾಡಲು  ಗುಂಪನ್ನು ಪ್ರಚೋದಿಸಿದ ಈ ಇಬ್ಬರು ನಾಯಕರ ವಿರುದ್ಧ ಕ್ರಮಕೈಗೊಳ್ಳಲು ಕಾಂಗ್ರೆಸ್ ನ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎಂದಿದ್ದಾರೆ.

ಶಿವಕುಮಾರ್ ಪ್ರತಿಪಾದನೆಯನ್ನು ತಳ್ಳಿಹಾಕಿರುವ ಮೂರ್ತಿ, ಡಿ.ಕೆ.ಶಿವಕುಮಾರ್ ಯಾಕಾಗಿ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತನ್ನ ಟೀಕೆಯನ್ನು ಮುಂದುವರಿಸಿದ ಮೂರ್ತಿ, ಸಂಪತ್ ರಾಜ್ ತಾನು ಅಪರಾಧಿಯಲ್ಲದಿದ್ದರೆ ಆಸ್ಪತ್ರೆಯಿಂದ ಪರಾರಿಯಾಗುತ್ತಿರಲಿಲ್ಲ. ಆತ ಅಪರಾಧಿಯಾಗಿದ್ದಾನೆ. ಅದು ನನಗೆ ಖಚಿತ ಎಂದು ಹೇಳಿದ್ದಾರೆ.

ಪ್ರಕರಣದ ಕುರಿತು ಶಿವಕುಮಾರ್ ರ ಮೌನವನ್ನು ಪ್ರಶ್ನಿಸಿರುವ ಅವರು ಪ್ರಕರಣದಲ್ಲಿ ತನ್ನನ್ನು ಬೆಂಬಲಿಸುವಂತೆ ಕೋರಿದ್ದಾರೆ.

Join Whatsapp
Exit mobile version