Home ಟಾಪ್ ಸುದ್ದಿಗಳು ರಾಜ್ಯ ರಾಜಕೀಯಕ್ಕೆ ಮರಳಲ್ಲ: ಮುಂದಿನ ಸಿಎಂ ಚರ್ಚೆಗೆ ತೆರೆ ಎಳೆದ ಶೋಭಾ ಕರಂದ್ಲಾಜೆ

ರಾಜ್ಯ ರಾಜಕೀಯಕ್ಕೆ ಮರಳಲ್ಲ: ಮುಂದಿನ ಸಿಎಂ ಚರ್ಚೆಗೆ ತೆರೆ ಎಳೆದ ಶೋಭಾ ಕರಂದ್ಲಾಜೆ

ಬೆಂಗಳೂರು: ನಾನು ರಾಜ್ಯ ರಾಜಕೀಯಕ್ಕೆ ಮರಳುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿದ್ದ ಮುಂದಿನ ಸಿಎಂ ಶೋಭಾ ಕರಂದ್ಲಾಜೆ ಎಂಬ ಗುಸುಗುಸು ಸುದ್ದಿಗೆ ತೆರೆ ಎಳೆದಿರುವ ಸಂಸದೆ, ಯಾವುದೇ ಕಾರಣಕ್ಕೂ ರಾಜ್ಯ ರಾಜಕೀಯಕ್ಕೆ ಮರಳೋದಿಲ್ಲ ಎಂದು ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾತನಾಡಿದ ಕರಂದ್ಲಾಜೆ, ರಾಜ್ಯ ರಾಜಕೀಯಕ್ಕೆ ವಾಪಸ್ ಬರುವುದಿಲ್ಲ, ಪ್ರಧಾನಿ ಮೋದಿ ಕೃಷಿ ಇಲಾಖೆಯ ಜವಾಬ್ದಾರಿಯನ್ನು ನೀಡಿದ್ದಾರೆ. ಅನೇಕ ರಾಜ್ಯಗಳಲ್ಲಿ ನಡೆಯುವ ಚುನಾವಣಾ ಉಸ್ತುವಾರಿಯನ್ನು ನನಗೆ ಕೊಟ್ಟಿದ್ದಾರೆ. ನಾನು ಇದರಲ್ಲಿಯೇ ಖುಷಿಯಾಗಿ ಇದ್ದೇನೆ ಎಂದು ಹೇಳಿದರು.

ರಾಜ್ಯ ರಾಜಕೀಯಕ್ಕೆ ಮರಳುವ ಚರ್ಚೆಗೆ ಆಧಾರವೇ ಇಲ್ಲ, ಈ ಬಗ್ಗೆ ಮಾತುಕತೆಯೂ ನಡೆದಿಲ್ಲ, ಕೊಟ್ಟಿರುವ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.

Join Whatsapp
Exit mobile version