ಶಿರೂರು ಗುಡ್ಡ ಕುಸಿತ: ಅರ್ಜುನ್ ಪತ್ತೆಗೆ ಡ್ರೋನ್ ಬಳಕೆ

Prasthutha|

ಶಿರೂರು: ಕೇರಳ ಮೂಲದ ಅರ್ಜುನ್ ನನ್ನು ಪತ್ತೆ ಮಾಡಲು ಅಡ್ವಾನ್ಸ್ಡ್ ಡ್ರೋನ್ ಬೇಸ್ಡ್ ಇಂಟೆಲಿಜೆಂಟ್ ಅಂಡರ್ ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಟರ್ ದೆಹಲಿಯಿಂದ ತರಿಸಲಾಗಿದೆ.

- Advertisement -


ಅತಿ ಹೆಚ್ಚಿನ ಸಾಮರ್ಥ್ಯದ ಡ್ರೋನ್ ಮೂಲಕ ಲಾರಿಯ ಮಾಹಿತಿ ಪಡೆಯುವ ಯತ್ನ ನಡೆದಿದೆ. ಹ್ಯಾಲಿಕಾಫ್ಟರ್ ಮೂಲಕವೂ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ.


ಶಿರೂರಿನಲ್ಲಿ ಕುಸಿತವಾಗಿರುವ ಗುಡ್ಡ ಹರಿದು ಗಂಗಾವಳಿ ನದಿ ತಳಭಾಗದಲ್ಲಿ ಅರ್ಜುನ್ ಸಂಚರಿಸುತ್ತಿದ್ದ ಲಾರಿ ಅವಶೇಷ ಪತ್ತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಖಚಿತ ಪಡಿಸಿದ್ದಾರೆ. ಅದನ್ನು ಮೇಲೆತ್ತಲು ಎಲ್ಲಾ ರೀತಿಯ ಪ್ರಯತ್ನ ಮುಂದುವರೆದಿದೆ. ಮಿಲಿಟರಿ ಪಡೆಯವರು ಲಾರಿ ಮೇಲೆತ್ತಲು ಶ್ರಮಿಸುತ್ತಿದ್ದಾರೆ.



Join Whatsapp
Exit mobile version