Home ಟಾಪ್ ಸುದ್ದಿಗಳು ಪ್ರಜ್ಞಾಸಿಂಗ್ ವಿರುದ್ಧ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ದೂರು

ಪ್ರಜ್ಞಾಸಿಂಗ್ ವಿರುದ್ಧ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ದೂರು

ಶಿವಮೊಗ್ಗ: ದ್ವೇಷ ಭಾಷಣದ ಹಿನ್ನೆಲೆಯಲ್ಲಿ ಭೋಪಾಲ್ ನ ಬಿಜೆಪಿ ಸಂಸದೆ ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್ ವಿರುದ್ಧ ಎಐಸಿಸಿ ಮುಖಂಡ ತೆಹಸೀನ್ ಪೂನಾವಾಲಾ ಪರವಾಗಿ ಜಿಲ್ಲಾ ಕಾಂಗ್ರೆಸ್ ಇಲ್ಲಿನ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.


ಡಿ.25ರಂದು ಶಿವಮೊಗ್ಗದಲ್ಲಿ ನಡೆದಿದ್ದ ಹಿಂದೂ ಜಾಗರಣ ವೇದಿಕೆಯ ತ್ರೈವಾರ್ಷಿಕ ಸಮ್ಮೇಳನದಲ್ಲಿ ಪ್ರಜ್ಞಾಸಿಂಗ್ ದ್ವೇಷ ಭಾಷಣ ಮಾಡಿದ್ದರು.
ಮಾಧ್ಯಮಗಳ ವರದಿ ಆಧರಿಸಿ ತೆಹಸೀನ್ ಪೂನಾವಾಲ ಟ್ವಿಟರ್ ಮೂಲಕ ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರಿಗೆ ದೂರು ನೀಡಿ ದ್ವೇಷ ಭಾಷಣದ ಹಿನ್ನೆಲೆಯಲ್ಲಿ ಸಾದ್ವಿ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಮನವಿ ಮಾಡಿದ್ದರು.

ಟ್ವಿಟರ್ ಮೂಲಕ ದೂರು ನೀಡಿದಲ್ಲಿ ನಿಯಮಾವಳಿ ಅನ್ವಯ ಪರಿಗಣಿಸಲು ಆಗುವುದಿಲ್ಲ. ಖುದ್ದಾಗಿ ಬಂದು ದೂರು ದಾಖಲಿಸುವಂತೆ ಪೂನವಾಲಾ ಅವರಿಗೆ ತಿಳಿಸಲಾಗಿದೆ ಎಂದು ಎಸ್ಪಿ ಪ್ರತಿಕ್ರಿಯಿಸಿದ್ದರು.

ತೆಹಸೀನ್ ಪೂನಾವಾಲಾ ಅವರು ಶಿವಮೊಗ್ಗಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರ ಪರವಾಗಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Join Whatsapp
Exit mobile version