Home Uncategorized ಟಿ. ಶೆಟ್ಟಿಗೇರಿ| ನೀರುಪಾಲಾಗಿದ್ದ ಬಾಲಕನ ಮೃತದೇಹ ಪತ್ತೆ

ಟಿ. ಶೆಟ್ಟಿಗೇರಿ| ನೀರುಪಾಲಾಗಿದ್ದ ಬಾಲಕನ ಮೃತದೇಹ ಪತ್ತೆ

ಟಿ. ಶೆಟ್ಟಿಗೇರಿ: ಶನಿವಾರ ಆಕಸ್ಮಿಕವಾಗಿ ನೀರು ಪಾಲಾಗಿದ್ದ ಹನ್ನೆರಡು ವರ್ಷದ ಬಾಲಕ ಕಾರ್ಯಪ್ಪ ಮೃತದೇಹ ಇಂದು ಪತ್ತೆಯಾಗಿದೆ.ಶನಿವಾರ ಸಂಜೆ ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ ಗ್ರಾಮದ ಚಟ್ಟಂಗಡ ರೇವತಿ (32) ಹಾಗೂ ಪುತ್ರ ಕಾರ್ಯಪ್ಪ (12) ಲಕ್ಷ್ಮಣತೀರ್ಥ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದರು.

ರೇವತಿ ಅವರ ಮೃತದೇಹ ಭಾನುವಾರ ಪತ್ತೆಯಾಗಿತ್ತು. ಬಾಲ ಕಾರ್ಯಪ್ಪನ ಮೃತದೇಹಕ್ಕಾಗಿ ತೀವ್ರ ಶೋಧ ನಡೆಸಲಾಗಿತ್ತು. ಸ್ಥಳೀಯ ನಿವಾಸಿಗಳ ನಿರಂತರ ಪ್ರಯತ್ನದ ನಂತರ ಇಂದು ಬಾಲಕ ಕಾರ್ಯಪ್ಪನ ಮೃತದೇಹ ಪತ್ತೆಯಾಗಿದೆ. ಶ್ರೀಮಂಗಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version