Home ಟಾಪ್ ಸುದ್ದಿಗಳು ಕಾಲೇಜು ಚುನಾವಣೆ ವಿಚಾರದಲ್ಲಿ ಘರ್ಷಣೆ: ಕೇರಳದ ಇಡುಕ್ಕಿಯಲ್ಲಿ SFI ಕಾರ್ಯಕರ್ತನ ಹತ್ಯೆ

ಕಾಲೇಜು ಚುನಾವಣೆ ವಿಚಾರದಲ್ಲಿ ಘರ್ಷಣೆ: ಕೇರಳದ ಇಡುಕ್ಕಿಯಲ್ಲಿ SFI ಕಾರ್ಯಕರ್ತನ ಹತ್ಯೆ

ಇಡುಕ್ಕಿ (ಕೇರಳ): ಕಾಲೇಜು ಚುನಾವಣೆ ಸಂಬಂಧ SFI ಮತ್ತು KSU ಸಂಘಟನೆಗಳ ಕಾರ್ಯಕರ್ತರ ಮಧ್ಯೆ ಉಂಟಾದ ಸಂಘರ್ಷದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು  ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಇಡುಕ್ಕಿಯಲ್ಲಿ ಸೋಮವಾರ ನಡೆದಿದೆ.

ಹತ್ಯೆಯಾದ ವಿದ್ಯಾರ್ಥಿ ಮೂಲತಃ ಕಣ್ಣೂರು ನಿವಾಸಿ ಧೀರಜ್ ಎಂದು ತಿಳಿದು ಬಂದಿದೆ.

ಕೆಲವು ದಿನಗಳ ಮೊದಲು ಚುನಾವಣೆಗೆ ಸಂಬಂಧಿಸಿ ಕಾಲೇಜಿನಲ್ಲಿ ವಿವಾದ ಪ್ರಾರಂಭವಾಗಿತ್ತು. ಸೋಮವಾರ ಮಧ್ಯಾಹ್ನ ಕೂಡ ಈ ವಿವಾದ ತಾರಕಕ್ಕೇರಿದ್ದು, ಉಭಯ ತಂಡಗಳ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಧೀರಜ್ ಗೆ ತಂಡ ಚೂರಿಯಿಂದ ಇರಿದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೋರ್ವ ಕಾರ್ಯಕರ್ತ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

  ಪ್ರತಿ ವರ್ಷವೂ ಚುನಾವಣೆಗೆ ಸಂಬಂಧಿಸಿ ಈ ರೀತಿಯ ವಿವಾದಗಳು ಕಾಲೇಜಿನಲ್ಲಿ ನಡೆಯುತ್ತಿದ್ದವು. ಆ ಕಾರಣದಿಂದಲೇ ಕಾಲೇಜು ಅಧಿಕೃತರು ಯಾರೂ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎನ್ನಲಾಗಿದೆ.

Join Whatsapp
Exit mobile version