Home ಟಾಪ್ ಸುದ್ದಿಗಳು ಬೋಳಿಯಾರ್ ಅಮಾಯಕ ಮುಸ್ಲಿಮರ ಬಂಧನ ವಿರೋಧಿಸಿ SDPI ಯಿಂದ ಇಂದು  ಕೊಣಾಜೆ ಚಲೋ

ಬೋಳಿಯಾರ್ ಅಮಾಯಕ ಮುಸ್ಲಿಮರ ಬಂಧನ ವಿರೋಧಿಸಿ SDPI ಯಿಂದ ಇಂದು  ಕೊಣಾಜೆ ಚಲೋ

ಉಳ್ಳಾಲ: ಬಿಜೆಪಿ ಸಂಘಪರಿವಾರದ ಕಾರ್ಯಕರ್ತರು ವಿಜಯೋತ್ಸವದ ಹೆಸರಿನಲ್ಲಿ ಬೊಳಿಯಾರಿನಲ್ಲಿ ಪ್ರಚೋದನಕಾರಿ ಘೋಷಣೆ ಕೂಗಿ ಗಲಭೆಯನ್ನು ಹುಟ್ಟು ಹಾಕಿದ ಬಳಿಕ ಪೊಲೀಸ್ ಇಲಾಖೆ ನಿರಂತರವಾಗಿ ಮುಸ್ಲಿಂ ಸಮುದಾಯದ ಯುವಕರನ್ನು  ಬೇಟೆಯಾಡುತ್ತಿರುವಾಗ, ಕಣ್ಣು ಮುಚ್ಚಿ ಕುಳಿತ ರಾಜ್ಯ ಸರಕಾರದ ದ್ವಿಮುಖ ದೋರಣೆಯನ್ನು ವಿರೋಧಿಸಿ ಇಂದು  (ಮಂಗಳವಾರ) ಕೊಣಾಜೆ ಪೊಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ (ಕೊಣಾಜೆ ಚಲೋ ) ನಡೆಯಲಿದೆ ಎಂದು SDPI ಮಂಗಳೂರು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಬಷೀರ್ ಯಸ್ ಎಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಅನ್ಯಾಯ, ಅನೀತಿ, ತಾರತಮ್ಯದ ವಿರುದ್ಧ ನಡೆಯುವ ಈ ಹೋರಾಟದಲ್ಲಿ ನಾಡಿನ ಎಲ್ಲಾ ವರ್ಗದ  ಪ್ರಜ್ಞಾವಂತ ನಾಗರಿಕರು, ಮಹಿಳೆಯರು, ಪ್ರಗತಿಕರ ಚಿಂತಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಬಷೀರ್ ರವರು ಕರೆ ಕೊಟ್ಟಿದ್ದಾರೆ

Join Whatsapp
Exit mobile version