Home ಟಾಪ್ ಸುದ್ದಿಗಳು SDPI ರಾಜ್ಯ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ನೇತೃತ್ವದ ತಂಡ ಇಂದು ಮಂಗಳೂರಿಗೆ

SDPI ರಾಜ್ಯ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ನೇತೃತ್ವದ ತಂಡ ಇಂದು ಮಂಗಳೂರಿಗೆ

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ಯವರ ನೇತೃತ್ವದ ಚುನಾವಣಾ ನಿರ್ವಹಣಾ ತಂಡವು ಇಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.

ಇಂದು(ಸೋಮವಾರ) ಬೆಳಿಗ್ಗೆ ಮಂಗಳೂರಿನ ಶ್ರೀನಿವಾಸ್ ಹೋಟೇಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಲಿರುವ ಅವರು ಮಧ್ಯಾಹ್ನ ನಂತರ ಉಳ್ಳಾಲದಲ್ಲಿ ಕ್ಷೇತ್ರ ಸಮಿತಿಯ ನಾಯಕರೊಂದಿಗೆ ಮತ್ತು ಎಲೆಕ್ಷನ್ ಕೋರ್ ಕಮಿಟಿಯೊಂದಿಗೆ ವಿಶೇಷ ಸಭೆಗಳನ್ನು ನಡೆಸಿ ಚುನಾವಣಾ ಕಾರ್ಯತಂತ್ರಗಳ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ ಎಂದು ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Join Whatsapp
Exit mobile version