Home ಟಾಪ್ ಸುದ್ದಿಗಳು ಎಸ್‌ಡಿಪಿಐ ರಕ್ಷಣಾ ತಂಡ ವಯನಾಡ್ ವಿಪತ್ತಿನ ಸ್ಥಳದಲ್ಲಿ ಸಕ್ರಿಯ, ಯಾವುದೇ ಸೇವೆಗೆ ಲಭ್ಯ: ಎಂ‌.ಕೆ. ಫೈಝಿ

ಎಸ್‌ಡಿಪಿಐ ರಕ್ಷಣಾ ತಂಡ ವಯನಾಡ್ ವಿಪತ್ತಿನ ಸ್ಥಳದಲ್ಲಿ ಸಕ್ರಿಯ, ಯಾವುದೇ ಸೇವೆಗೆ ಲಭ್ಯ: ಎಂ‌.ಕೆ. ಫೈಝಿ

ಬೆಂಗಳೂರು: ವಯನಾಡ್‌‌ನ ಚೂರಲ್‌ ಮಲಾ ಪ್ರದೇಶದಲ್ಲಿ ಸಂಭವಿಸಿದ ಭಯಂಕರ ಪ್ರಕೃತಿ ವಿಕೋಪದಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡಿರುವವರಿಗೆ ಎಸ್‌ಡಿಪಿಐ ಪಕ್ಷ ಸಂತಾಪ ಸೂಚಿಸುತ್ತದೆ ಮತ್ತು ದುಃಖತಪ್ತ ಕುಟುಂಬ ಸದಸ್ಯರ ದುಃಖದಲ್ಲಿ ಭಾಗಿಯಾಗುತ್ತದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ತಿಳಿಸಿದ್ದಾರೆ.

ಎಸ್‌ಡಿಪಿಐ ರಕ್ಷಣಾ ತಂಡದ ಸ್ವಯಂಸೇವಕರು ವಿಪತ್ತಿನ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರು ರಕ್ಷಣಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಯಾವುದೇ ಸೇವೆಗೆ ಲಭ್ಯವಿರುತ್ತಾರೆ ಎಂದೂ ಅವರು ತಿಳಿಸಿದ್ದಾರೆ.

Join Whatsapp
Exit mobile version