Home ಕರಾವಳಿ ಸುರತ್ಕಲ್ ಜನತಾ ಕಾಲೋನಿ ರಸ್ತೆ ದುರಸ್ತಿಗೊಳಿಸಲು ಒತ್ತಾಯಿಸಿ SDPIನಿಂದ ಪ್ರತಿಭಟನೆ

ಸುರತ್ಕಲ್ ಜನತಾ ಕಾಲೋನಿ ರಸ್ತೆ ದುರಸ್ತಿಗೊಳಿಸಲು ಒತ್ತಾಯಿಸಿ SDPIನಿಂದ ಪ್ರತಿಭಟನೆ

ಸುರತ್ಕಲ್:  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುರತ್ಕಲ್ ಬ್ಲಾಕ್ ಸಮಿತಿ ವತಿಯಿಂದ ಜನತಾ ಕಾಲೋನಿ ಮತ್ತು ಎಂ ಆರ್ ಪಿ ಎಲ್ ರಸ್ತೆ ದುರಸ್ತಿಗೊಳಿಸುವಂತೆ ಒತ್ತಾಯಿಸಿ ಬುಧವಾರ ಜನತಾ ಕಾಲೋನಿ ಮಸೀದಿಯಿಂದ ಕಾನ ಜಂಕ್ಷನ್ ವರೆಗೆ ಕಾಲ್ನಡಿಗೆ ಜಾಥಾ ಹಾಗೂ ಪ್ರತಿಭಟನೆ ನಡೆಯಿತು.

ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಅಬೂಬಕ್ಕರ್ ಕುಳಾಯಿ ಮಾತನಾಡಿ, ಹಲವು ಸಾರಿ ಮನವಿಯನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೊಜನೆವಾಗಿಲ್ಲ. 20 ದಿನದೊಳಗಾಗಿ ವಾರದಲ್ಲಿ ರಸ್ತೆ ದುರಸ್ತಿ ನಡೆಯದಿದ್ದಲ್ಲಿ ರಸ್ತೆ ತಡೆದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಸದಸ್ಯ  ಇರ್ಫಾನ್ ಕಾಲನಿ  ಪ್ರಸ್ತಾವಿಕವಾಗಿ ಮಾತನಾಡಿದರು

 ಆಯುಕ್ತರು ಪ್ರತಿಭಟನಾ  ಸ್ಥಳಕ್ಕೆ ಆಗಮಿಸಿ ‌ಮನವಿಯನ್ನು ಸ್ವೀಕರಿಸಿದರು.‌ ಪ್ರತಿಭಟನಾ ಸಭೆಯಲ್ಲಿ ಸುರತ್ಕಲ್ ಬ್ಲಾಕ್ ಅಧ್ಯಕ್ಷ ಸಲಾಂ‌ ಕಾನ,  ಜಿಲ್ಲಾ ಸಮಿತಿ ಸದಸ್ಯ ಅಝೀಝ್ ಸುರತ್ಕಲ್ ಹಾಗೂ ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಸದಸ್ಯ ನುರುಲ್ಲಾ ಕುಲಾಯಿ ಉಪಸ್ಥಿತರಿದ್ದರು.   

Join Whatsapp
Exit mobile version