Home ಕರಾವಳಿ ವಿದ್ಯಾರ್ಥಿಗಳ ಮೇಲೆ ಆರ್.ಎಸ್.ಎಸ್. ಕಾರ್ಯಕರ್ತರಿಂದ ಹಲ್ಲೆ: SDPI ಖಂಡನೆ

ವಿದ್ಯಾರ್ಥಿಗಳ ಮೇಲೆ ಆರ್.ಎಸ್.ಎಸ್. ಕಾರ್ಯಕರ್ತರಿಂದ ಹಲ್ಲೆ: SDPI ಖಂಡನೆ

ಮಂಜೇಶ್ವರ: ಗೋವಿಂದ ಪೈ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಪರಸ್ಪರ ಮಾತನಾಡಿದರು ಎಂಬ ಕಾರಣ ಮುಂದಿಟ್ಟು ಆರ್.ಎಸ್.ಎಸ್. ಕಾರ್ಯಕರ್ತರು ವಿದ್ಯಾರ್ಥಿನಿಯ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿರುವುದು ಖಂಡನೀಯ.ಆರೋಪಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಎಸ್.ಡಿ.ಪಿ.ಐ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಇಕ್ಬಾಲ್ ಕುಂಜತ್ತೂರು ಆಗ್ರಹಿಸಿದ್ದಾರೆ.

 ಆರ್ ಎಸ್ ಎಸ್ ಕಾರ್ಯಕರ್ತರ ದಾಳಿಯಲ್ಲಿ ಗಂಭೀರ ಗಾಯ ಗೊಂಡ ವಿದ್ಯಾರ್ಥಿನಿಯನ್ನು ಮಂಗಳೂರಿನ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಕಾಲೇಜಿನಲ್ಲಿ ಕೋಮು ಧ್ರುವೀಕರಣ ನಡೆಸುವ ಹುನ್ನಾರದ ಭಾಗವಾಗಿ ಸಂಘಪರಿವಾರ ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ. ದಾಳಿ ನಡೆಸಿ ಕೋಮುಸಂಘರ್ಷಕ್ಕೆ ಪ್ರಯತ್ನಿಸುತ್ತಿರುವ ಆರ್. ಎಸ್.ಎಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಇಕ್ಬಾಲ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ

Join Whatsapp
Exit mobile version