Home ಜಾಲತಾಣದಿಂದ “ಈಗಷ್ಟೇ ನಾನು ಮಸೀದಿಗೆ ಹೋಗಿ ನೀರು ಕುಡಿದು ಬಂದೆ, ಯಾರೂ ನನ್ನ ಹೆಸರು-ಧರ್ಮ ಕೇಳಲಿಲ್ಲ”। ಯುವಕ...

“ಈಗಷ್ಟೇ ನಾನು ಮಸೀದಿಗೆ ಹೋಗಿ ನೀರು ಕುಡಿದು ಬಂದೆ, ಯಾರೂ ನನ್ನ ಹೆಸರು-ಧರ್ಮ ಕೇಳಲಿಲ್ಲ”। ಯುವಕ ಸಾಗರ್ ಸಿಂಗ್ ಥೋಮರ್ ಫೇಸ್ಬುಕ್ ಪೋಸ್ಟ್ ವೈರಲ್

ಅಲಿಗಢ : ಉತ್ತರ ಪ್ರದೇಶದ ಅಲಿಗಢದ ಯುವಕ ಸಾಗರ್ ಸಿಂಗ್ ಥೋಮರ್ ಎನ್ನುವ ಯುವಕ ತನ್ನ ಫೇಸ್ಬುಕ್ ಪೋಸ್ಟ್ ಒಂದರಲ್ಲಿ ಮಸೀದಿಯೊಂದರ ಅಂಗ ಸ್ನಾನ ಮಾಡುವ ಸ್ಥಳದಲ್ಲಿ ನೀರು ಕುಡಿಯುತ್ತಿರುವ ಫೋಟೋ ಒಂದನ್ನು ಹಾಕಿದ್ದು, ಅದರಲ್ಲಿ “ ನಾನು ಈಗಷ್ಟೇ ಮಸೀದಿಯಲ್ಲಿನೀರು ಕುಡಿದುಕೊಂಡು ಬಂದೆ. ಅಚ್ಚರಿಯ ವಿಷಯವೇನೆಂದರೆ ಅಲ್ಲಿ ಯಾರೂ ನನ್ನ ಹೆಸರು ಮತ್ತು ಧರ್ಮ ಯಾವುದೆಂದು ಕೇಳಲಿಲ್ಲ ಎಂದು” ಒಕ್ಕಣೆ ಬರೆದುಕೊಂಡಿದ್ದಾನೆ. ಇದು ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿದ್ದು, ಯುವಕನ ಪೊಸ್ಟ್ ಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ.

ಸಾಗರ್ ಸಿಂಗ್ ಥೋಮರ್ ಈ ಪೋಸ್ಟನ್ನು ಮಾಡಲು ಕಾರಣಗಳು ಇದೆ. ಇತ್ತಿಚೆಗೆ ಇದೇ ಉತ್ತರ ಪ್ರದೇಶದಲ್ಲಿ ಆಸಿಫ್ ಎನ್ನುವ ಮುಸ್ಲಿಮ್ ಬಾಲಕನೋರ್ವ ದೇವಸ್ಥಾನವೊಂದರಲ್ಲಿ ನೀರು ಕುಡಿದ ಕಾರಣಕ್ಕಾಗಿ ಮತಾಂಧ ಯುವಕನೋರ್ವ ಆ ಬಾಲಕನ ಮೇಲೆ ಮಾರಣಂತಿಕವಾಗಿ ಹಲ್ಲೆ ನಡೆಸಿದ್ದ. ಮಾತ್ರವಲ್ಲ ತಾನು ಹಲ್ಲೆ ನಡೆಸಿದ ದೃಶ್ಯಗಳನ್ನು ವೀಡಿಯೋ ಮಾಡುವಂತೆ ತನ್ನೊಂದಿಗೆ ಇದ್ದವನೊಂದಿಗೆ ಕೇಳಿಕೊಂಡಿದ್ದ. ನಂತರ ಆ ವೀಡಿಯೋವನ್ನು ಹಿಂದೂ ಏಕ್ತಾ ಸಂಘ್ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡಿದ್ದ. ಇದು ದೇಶದಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಜಾಲ ತಾಣಗಳಲ್ಲಿ #SorryAsif ಎಂಬ ಹ್ಯಾಶ್ ಟ್ಯಾಗ್ ಕೂಡಾ ಟ್ರೆಂಡಿಂಗ್ ಆಗಿತ್ತು.

ಇದೀಗ ಅಂತಹಾ ಮತಾಂಧ ಮನೋಸ್ಥಿತಿಗಳಿಗೆ ತಪರಾಕಿ ನೀಡುವಂತಹಾ ನಡೆಯೊಂದರಲ್ಲಿ ಯುವಕ ಸಾಗರ್ ಸಿಂಗ್ ಅಲಿಗಢದ ಮಸೀದಿಯೊಂದಕ್ಕೆ ಹೋಗಿ ಅಲ್ಲಿನ ನೀರು ಕುಡಿದು ನಂತರ ಆ ಬಗ್ಗೆ ಫೇಸ್ಬುಕ್ ಪೋಸ್ಟ್ ಹಾಕಿದ್ದ. ಆ ಮೂಲಕ ಸಮಾಜಕ್ಕೆ ಉತ್ತಮವಾದಂತಹಾ ಸಂದೇಶವನ್ನು ನೀಡಿದ್ದಾನೆ. ಅದೀಗ ವೈರಲ್ ಆಗಿದೆ

अभी मैं मस्जिद गया था और पानी पीकर आया और ताज्जुब की बात ये किसी ने मेरा नाम व धर्म नहीं पूछा…

Posted by Sagar Singh Tomar on Monday, March 15, 2021

Join Whatsapp
Exit mobile version