Home ಟಾಪ್ ಸುದ್ದಿಗಳು ದೇಶದ ಹಿತವನ್ನು RSS ಎಂದಿಗೂ ಒಪ್ಪಲ್ಲ: ಕೆ.ಎನ್. ರಾಜಣ್ಣ

ದೇಶದ ಹಿತವನ್ನು RSS ಎಂದಿಗೂ ಒಪ್ಪಲ್ಲ: ಕೆ.ಎನ್. ರಾಜಣ್ಣ

ತುಮಕೂರು: ದೇಶದ ಹಿತವನ್ನು ಆರ್ ಎಸ್ಎಸ್ ಎಂದಿಗೂ ಒಪ್ಪಲ್ಲ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ನಡೆದ ತ್ಯಾಗ ಬಲಿದಾನದಲ್ಲಿ ಹೆಚ್ಚು ನಷ್ಟವನ್ನು ಅನುಭವಿಸಿದ್ದು ಕಾಂಗ್ರೆಸ್. ಇದನ್ನು ಯುವಕರು ಅರ್ಥಮಾಡಿಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರು ಈಗ ದೇಶ ಆಳುತ್ತಿದ್ದಾರೆ ಎಂದರು.


ದೇಶದ ಇತಿಹಾಸದಲ್ಲಿ ಆರ್ ಎಸ್ ಎಸ್ ಎಂದಿಗೂ ತನ್ನ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿಲ್ಲ. ಈಗ ಮಾತ್ರ ಅಮೃತ ಮಹೋತ್ಸವ ಎಂಬ ನೆಪಕ್ಕಾಗಿ ಹಾರಿಸಿದ್ದು ದೇಶದ ಭಾವೈಕ್ಯತೆಗೆ ಮಾರಕ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Join Whatsapp
Exit mobile version