Home Uncategorized ಕಕ್ಕಬ್ಬೆ: ಪಯ್ನರಿ ರಸ್ತೆ ತಕ್ಷಣ ದುರಸ್ತಿಗೊಳಿಸುವಂತೆ ಗ್ರಾಮಸ್ಥರಿಂದ ಕೊಡಗು ಡಿ ಸಿ ಗೆ ಮನವಿ

ಕಕ್ಕಬ್ಬೆ: ಪಯ್ನರಿ ರಸ್ತೆ ತಕ್ಷಣ ದುರಸ್ತಿಗೊಳಿಸುವಂತೆ ಗ್ರಾಮಸ್ಥರಿಂದ ಕೊಡಗು ಡಿ ಸಿ ಗೆ ಮನವಿ

ಮಡಿಕೇರಿ: ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಯ್ನರಿ ಜುಮಾ ಮಸೀದಿ ಪ್ರದೇಶದಲ್ಲಿರುವ ರಸ್ತೆ ಸಂಪೂರ್ಣವಾಗಿ ಹದಗಟ್ಟಿದ್ದು ತಕ್ಷಣ ದುರಸ್ತಿಗೊಳಿಸಬೇಕೆಂದು ಒತ್ತಾಯಿಸಿ ಸ್ತಳೀಯ ಗ್ರಾಮಸ್ಥರು ಕಕ್ಕಬ್ಬೆ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿ, ಈ ಕೂಡಲೇ ದುರಸ್ಥಿಗೊಳಿಸುವಂತೆ ಕೊಡಗು ಜಿಲ್ಲಾದಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ರಸ್ತೆಯನ್ನು ಸರಿಪಡಿಸಲು ಹಲವು ಬಾರಿ ಮನವಿ ಸಲ್ಲಿಸಿದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ ಮತ್ತು ಚರಂಡಿ ಅವ್ಯವಸ್ತೆಯಿಂದ ಕೂಡಿದ್ದು , ವಾಹನ ಸಂಚಾರ ಮಾತ್ರವಲ್ಲದೆ ಪಾದಾಚಾರಿಗಳು ನಡೆದಾಡಲು ಸಾದ್ಯವಾಗುತ್ತಿಲ್ಲವೆಂಧು ಪ್ರತಿಭಟನಾಕಾರರು ಅಸಮಧಾನ ವ್ಯಕ್ತಪಡಿಸಿದರು.

ಮನವಿ ಸಲ್ಲಿಸಿದಾಗಲೆಲ್ಲ ಕೇವಲ ಭರವಸೆ ನೀಡುತ್ತಾರೆಯೇ ಹೊರತು ವರ್ಷ ಕಳೆದರೂ ಡಾಂಬರೀಕರಣಗೊಳಿಸಲಿಲ್ಲ, ರಸ್ತೆ ಕಾಮಗಾರಿಯನ್ನು ತಕ್ಷಣ ಆರಂಭಿಸದಿದ್ದಲ್ಲಿ ಡಿಸಿ ಕಚೇರಿ ಎದುರು ಬ್ರಹತ್ ಪ್ರತಿಭಟನೆ ಕೈಗೊಳ್ಳುವುದಾಗಿಯೂ ಈ ಬರುವ ಜಿಲ್ಲಾ ಪಂಚಾಯತ್ ಎಲಕ್ಶನ್ನಲ್ಲಿ ಊರಿನ ಜನರು ಮತ ಬಹಿಷ್ಕಾರದ ಮೂಲಕ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿಯೂ ಕಕ್ಕಬ್ಬೆ ಪಂಚಾಯಿತಿ ಅದ್ಯಕ್ಷರಾದ ಕಲಿಯಂಡ ಸಂಪ ಮತ್ತು ಪಯ್ನರಿ ಮಸೀದಿಯ ಮಾಜಿ ಅದ್ಯಕ್ಷರು ಮಹಮ್ಮದ್ ಹಾಜಿ ಹಾಗೂ ಗ್ರಾಮದ ಯುವಕರು ಎಚ್ಚರಿಕೆ ನೀಡಿದರು.

Join Whatsapp
Exit mobile version