Home ಟಾಪ್ ಸುದ್ದಿಗಳು ‘ಈಗಲೂ ಯಡಿಯೂರಪ್ಪನವರೇ ನಮ್ಮ ನಾಯಕ’: ಶಾಸಕ ಎಂಪಿ ರೇಣುಕಾಚಾರ್ಯ

‘ಈಗಲೂ ಯಡಿಯೂರಪ್ಪನವರೇ ನಮ್ಮ ನಾಯಕ’: ಶಾಸಕ ಎಂಪಿ ರೇಣುಕಾಚಾರ್ಯ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡರೂ ಯಡಿಯೂರಪ್ಪ ಅವರೇ ನಮ್ಮ ನಾಯಕರು ಎಂದು ಹೊನ್ನಳ್ಳಿ ಶಾಸಕ ಎಂಪಿ.ರೇಣುಕಾಚಾರ್ಯ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೇಳಿದ್ದೇವೆ. ಮಧ್ಯಕರ್ನಾಟಕಕ್ಕೆ ಈ ಬಾರಿಯಾದ್ರೂ ಅವಕಾಶ ಕೊಡಿ ಎಂಬುದಾಗಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ಸಿಎಂ ಅವರಲ್ಲಿ ಕೇಳಿಕೊಂಡಿದ್ದೇವೆ ಎಂದು ತಿಳಿಸಿದರು.

ನನಗೆ ಯಾವ ಖಾತೆ ಕೊಟ್ಟರು ನಿಭಾಯಿಸುತ್ತೇನೆ. ಆದ್ರೇ ಕೂಸು ಹುಟ್ಟೋ ಮೊದಲೇ ಕುಲಾವಿ ಹೊಲಿಸಿದ್ರು ಅಂತ ಆ ಬಗ್ಗೆ ಈಗ ಮಾತನಾಡೋದಿಲ್ಲ. ಇದೇ ಖಾತೆ ಕೊಡಿ ಅಂತ ಕೇಳುವುದು ಇಲ್ಲ ಎಂದು ಹೇಳಿದ್ದಾರೆ.

ನಾನು ಯಡಿಯೂರಪ್ಪ ನೆರಳಿನಲ್ಲೇ ಬೆಳೆದವನು. ಬಿಎಸ್ ಯಡಿಯೂರಪ್ಪ ಎಲ್ಲೋ ಇದ್ದ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ನಾನು ಎದೆ ಮುಟ್ಟಿ ಹೇಳಿಕೊಳ್ಳುತ್ತೇನೆ. ಸಿಎಂ ಆಗಿ ಬಸವರಾಜ ಬೊಮ್ಮೊಯಿ ಇದ್ದರೂ, ನಮ್ಮ ನಾಯಕ ಯಡಿಯೂರಪ್ಪ ಎಂದು ತಿಳಿಸಿದರು.

Join Whatsapp
Exit mobile version