Home ಟಾಪ್ ಸುದ್ದಿಗಳು ನಮ್ಮ ಸರ್ಕಾರ ಬಂದ ಮೇಲೆ ರಾಯರೆಡ್ಡಿಗೆ `ಸತ್ಯವಾನ್’ ಪ್ರಶಸ್ತಿ: ಅಶೋಕ್

ನಮ್ಮ ಸರ್ಕಾರ ಬಂದ ಮೇಲೆ ರಾಯರೆಡ್ಡಿಗೆ `ಸತ್ಯವಾನ್’ ಪ್ರಶಸ್ತಿ: ಅಶೋಕ್

0

ಬೆಂಗಳೂರು: ಸರ್ಕಾರದ ದುಸ್ಥಿತಿ ಬಗ್ಗೆ ಓಪನ್ ಆಗಿ ಹೇಳಿರುವ ಬಸವರಾಜ ರಾಯರೆಡ್ಡಿಗೆ ನಮ್ಮ ಸರ್ಕಾರ ಬಂದ ನಂತರ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟಾಂಗ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಗ್ಯಾರಂಟಿ ಬೇಕಾ, ರಸ್ತೆ ಬೇಕಾ ಎಂದು ರಾಯರೆಡ್ಡಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಪುಣ್ಯಾತ್ಮ ಅವರೊಬ್ಬರು ಕರೆಕ್ಟ್ ಆಗಿ ಹೇಳಿದ್ದಾರೆ. ಈ ಸರ್ಕಾರ ಹೋಗೋವಾಗ ಜನರ ಕೈಗೆ ಚಿಪ್ಪು ಕೊಟ್ಟೇ ಹೋಗೋದು. ನಮ್ಮ ಸರ್ಕಾರ ಬಂದ ಮೇಲೆ ರಾಯರೆಡ್ಡಿಗೆ ಪ್ರಶಸ್ತಿ ಕೊಡ್ತೇವೆ. ಸರ್ಕಾರದ ಬಗ್ಗೆ ರಾಯರೆಡ್ಡಿ ಸತ್ಯ ಹೇಳಿದ್ದಾರೆ. ಹಾಗಾಗಿ ಅವರಿಗೆ `ಸತ್ಯವಾನ್ ರಾಯರೆಡ್ಡಿ’ ಪ್ರಶಸ್ತಿ ಕೊಡ್ತೇವೆ ಎಂದು ಟೀಕಿಸಿದ್ದಾರೆ

NO COMMENTS

LEAVE A REPLY

Please enter your comment!
Please enter your name here

Exit mobile version