Home ಟಾಪ್ ಸುದ್ದಿಗಳು ರಾಯಚೂರು: ಮೂವರು ಮಕ್ಕಳಿಗೆ ಕಚ್ಚಿದ ಹುಚ್ಚುನಾಯಿ

ರಾಯಚೂರು: ಮೂವರು ಮಕ್ಕಳಿಗೆ ಕಚ್ಚಿದ ಹುಚ್ಚುನಾಯಿ

ರಾಯಚೂರು: ಮೂವರು ಮಕ್ಕಳಿಗೆ ಹುಚ್ಚುನಾಯಿ ಕಚ್ಚಿ ಗಂಭೀರವಾದ ಗಾಯಗೊಳಿಸಿದ ಘಟನೆ ರಾಯಚೂರು ಜಿಲ್ಲೆಯ ಯಾರಗೇರಾ ಗ್ರಾಮದಲ್ಲಿ ನಡೆದಿದೆ. ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯಾರಗೇರಾ ಗ್ರಾಮದಲ್ಲಿ ಪಾವನಿ, ಅಸಿಯಾ, ಅನ್ಸಿಯಾ ಹುಚ್ಚುನಾಯಿ ದಾಳಿಗೊಳಗಾದ ಮಕ್ಕಳು.

ಬುಧವಾರ ಮಧ್ಯಾಹ್ನ ಮನೆಯ ಬಳಿ ಮಕ್ಕಳು ಆಟವಾಡುತ್ತಿದ್ದಾಗ ಹುಚ್ಚುನಾಯಿ ಕಚ್ಚಿದೆ.

ಮಕ್ಕಳಿಗೆ ಕಚ್ಚಿ ನಂತರ ಜಾನುವಾರುಗಳ ಮೇಲು ಹುಚ್ಚುನಾಯಿ ದಾಳಿ ಮಾಡಿದೆ. ಈ ವೇಳೆ ಗ್ರಾಮಸ್ಥರು ಎಚ್ಚೆತ್ತು ಹುಚ್ಚುನಾಯಿಯನ್ನು ಕೊಂದು ಹಾಕಿದ್ದಾರೆ. ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Join Whatsapp
Exit mobile version