Home ಕರಾವಳಿ ಪುತ್ತೂರು; ಬನ್ನೂರು ವಾರ್ಡಿಗೆ SDPI ನಿಯೋಗ ಭೇಟಿ, ಪ್ರಗತಿ ಪರಿಶೀಲನೆ

ಪುತ್ತೂರು; ಬನ್ನೂರು ವಾರ್ಡಿಗೆ SDPI ನಿಯೋಗ ಭೇಟಿ, ಪ್ರಗತಿ ಪರಿಶೀಲನೆ

ಪುತ್ತೂರು: ಪುತ್ತೂರು ನಗರಸಭೆಯ SDPI ಕೌನ್ಸಿಲರ್ ಝೊಹರಾ ರವರ ಬನ್ನೂರು ವಾರ್ಡಿಗೆ SDPI, ಜಿಲ್ಲಾಧ್ಯಕ್ಷ  ಅಥಾವುಲ್ಲಾ ಜೋಕಟ್ಟೆಯವರ ನೇತೃತ್ವದ ಜಿಲ್ಲಾ ನಿಯೋಗವು ಭೇಟಿ ನೀಡಿ ವಾರ್ಡಿನಲ್ಲಿ ಕೈಗೊಂಡ ಕೆಲಸ ಕಾರ್ಯಗಳನ್ನು ವೀಕ್ಷಿಸಿ ಪ್ರಗತಿ ಪರಿಶೀಲನೆ ನಡೆಸಿತು.

 ವಾರ್ಡಿನ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿದ ನಿಯೋಗ, ವಾರ್ಡಿನಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳ ಬೇಕಾದ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿತು.

ಜಿಲ್ಲಾ ಕಾರ್ಯದರ್ಶಿ ಗಳಾದ ಅನ್ವರ್ ಸಾದತ್ ಬಜತ್ತೂರು, ಜಮಾಲ್ ಜೋಕಟ್ಟೆ ನಿಯೋಗದಲ್ಲಿದ್ದರು

ಈ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಕೆ. ಎ. ಸಿದ್ದೀಕ್ ಪುತ್ತೂರು, ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಅಶ್ರಫ್ ಬಾವು, ಸಮಿತಿ ಸದಸ್ಯರಾದ ಪಿಬಿಕೆ ಮುಹಮ್ಮದ್, ನಗರಸಭಾ ಸಮಿತಿ ಅಧ್ಯಕ್ಷರಾದ ಸಿರಾಜ್ ಎ.ಕೆ , ಕೌನ್ಸಿಲರ್ ಝೊಹರಾ, ಸ್ಥಳೀಯ ಮುಖಂಡರಾದ ಜುನೈದ್ ಸಾಲ್ಮರ, ಲತೀಫ್ ಸಾಲ್ಮರ  ಹಿಫಾಸ್ ಬನ್ನೂರು, ಷರೀಫ್ ಬನ್ನೂರು, ಇಬ್ರಾಹಿಂ ಕೆ ಎಂ ಹಾಗೂ ಇತರರು ಉಪಸ್ಥಿತರಿದ್ದರು.

Join Whatsapp
Exit mobile version