Home ಟಾಪ್ ಸುದ್ದಿಗಳು ಪುತ್ತೂರು: ಹೊಳೆಗೆ ಬಿದ್ದ ಕಾರು, ಇಬ್ಬರು ಯುವಕರು ನೀರು ಪಾಲು

ಪುತ್ತೂರು: ಹೊಳೆಗೆ ಬಿದ್ದ ಕಾರು, ಇಬ್ಬರು ಯುವಕರು ನೀರು ಪಾಲು

ಕಡಬ: ಕಾರೊಂದು ಹೊಳೆಗೆ ಬಿದ್ದ ಘಟನೆ ಶನಿವಾರ ತಡರಾತ್ರಿ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ನಡೆದಿದ್ದು, ಇಬ್ಬರು ನೀರುಪಾಲಾಗಿದ್ದರೆ.

ನೀರುಪಾಲಾದ ಯುವಕರನ್ನು ವಿಟ್ಲದ ಕುಂಡಡ್ಕ ನಿವಾಸಿ ಧನುಷ್ (26) ಹಾಗೂ ಮಂಜೇಶ್ವರ ನಿವಾಸಿ ಧನುಷ್ (21) ಎಂದು ತಿಳಿದು ಬಂದಿದೆ.

ಇವರು ಶನಿವಾರ ತಡರಾತ್ರಿ ಮಾರುತಿ 800 ಕಾರಿನಲ್ಲಿ ಪುತ್ತೂರಿನಿಂದ ಕಾಣಿಯೂರು ಕಡೆಗೆ ತೆರಳುತ್ತಿದ್ದ ವೇಳೆ ಬೈತಡ್ಕ ಗೌರಿಹೊಳೆಗೆ ಬಿದ್ದಿದ್ದು, ಈ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

Join Whatsapp
Exit mobile version