Home ಟಾಪ್ ಸುದ್ದಿಗಳು ಭಾರತ್ ಬಂದ್ | ರಾಜಧಾನಿಯಿಂದ ಹೊರಟ ಪ್ರತಿಭಟನಾ ಜಾಥಾ

ಭಾರತ್ ಬಂದ್ | ರಾಜಧಾನಿಯಿಂದ ಹೊರಟ ಪ್ರತಿಭಟನಾ ಜಾಥಾ

ಬೆಂಗಳೂರು: ವಿವಾದಿತ ಕೃಷಿ ಕಾಯ್ದೆ ವಿರೋಧಿಸಿ ರೈತ ಮತ್ತು ವಿವಿಧ ಸಂಘಟನೆಗಳು ನೀಡಿರುವ ಭಾರತ್ ಬಂದ್ ಕರೆಗೆ ದೇಶದ ಹಲವೆಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಗೊಂಡಿದೆ.


ಆನಂದರಾವ್ ವೃತ್ತದ ಗಾಂಧಿ‌ ಪ್ರತಿಮೆ, ಸ್ವಾತಂತ್ರ್ಯ ‌ಉದ್ಯಾನ, ಕೆ.ಆರ್. ವೃತ್ತ, ನೃಪತುಂಗ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗುತ್ತಿರುವ ರೈತರ ಜಾಥಾ‌ ಮೈಸೂರು ಬ್ಯಾಂಕ್ ವೃತ್ತದಲ್ಲಿ‌ ಬಹಿರಂಗ ಸಭೆಯಲ್ಲಿ ಮುಕ್ತಾಯವಾಗಲಿವೆ ಎಂದು ರೈತ ಪರ ಸಂಘಟನೆಗಳು ತಿಳಿಸಿವೆ.

ವಿವಾದಿತ ಕೃಷಿ ಕಾಯ್ದೆಗಳನ್ನು ಈ ಕೂಡಲೆ ಸರಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ರೈತರು , ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಜಾಥಾ ನಡೆಸುತ್ತಿದ್ದು, ಘೋಷಾವಾಕ್ಯಗಳನ್ನು ಕೂಗಿ ಕೇಂದ್ರ ಒಕ್ಕೂಟ ಸರಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಬೃಹತ್ ಸಂಖ್ಯೆಯಲ್ಲಿ ಸೇರಿರುವ ಪ್ರತಿಭಟನಾಕಾರರ ಮೆರವಣಿಗೆಯ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ.

Join Whatsapp
Exit mobile version