ಪಿ.ಎಫ್.ಐ ಸಂಘಟನೆಯ ಖಾತೆಗಳನ್ನು ಮುಟ್ಟುಗೋಲು ಹಾಕಿರುವುದನ್ನು ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ

Prasthutha|

ಶಿವಮೊಗ್ಗ: ಪಿ.ಎಫ್.ಐ ಸಂಘಟನೆಯ ಖಾತೆಗಳನ್ನು ಈಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿರುವುದನ್ನು ಖಂಡಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ ಆಯೋಜಿಸಲಾಗಿದ್ದು, ಇದರ ಭಾಗವಾಗಿ ಇಂದು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.

- Advertisement -

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮುಖಂಡ ಶಾಹಿದ್ ಖಾನ್, ಪಾಪ್ಯುಲರ್ ಫ್ರಂಟ್ ಸಂಘಟನೆಯನ್ನು ಈಡಿ ಮತ್ತು ಎನ್ ಐ ಎ ಮೂಲಕ ಆರ್ ಎಸ್ ಎಸ್ ಮತ್ತು ಬಿ ಜೆ ಪಿ ಹೆದರಿಸಲು ನೋಡುತ್ತಿದೆ. ಇದು ಅಧಿಕಾರದ ದುರ್ಬಳಕೆ ಮತ್ತು ಪ್ರಜಾಸತ್ತಾತ್ಮಕ ಹಕ್ಕಿನ ನಿರಾಕರಣೆಯಾಗಿದೆ. ಅವರಿಗೇನು ಗೊತ್ತು ಪಿ ಎಫ್ ಐ ಇಂತಹ ಬೆದರಿಕೆಗಳಿಂದ ಬೆದರಿ ಹಿಂದೆ ಸರಿಯುವಂತಹ ಸಂಘಟನೆಯಲ್ಲ ಮತ್ತು ನಮ್ಮ ಸಂಘಟನೆಯಲ್ಲಿ  ಒಬ್ಬನೇ ಒಬ್ಬ ಕಾರ್ಯಕರ್ತ ಇರುವವರೆಗೂ ಅವರ ಹಿಂದೂರಾಷ್ಟ್ರ ಅಜೆಂಡಾವನ್ನು ಪೂರ್ಣಗೊಳಿಸಲು ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಉಬೇದುಲ್ಲಾ, ಜಿಲ್ಲಾ ಕಾರ್ಯದರ್ಶಿ ಉಮರ್ ಫಾರೂಕ್ ಮತ್ತು ಕಾರ್ಯಕರ್ತರೂ ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.

Join Whatsapp
Exit mobile version