Home ಟಾಪ್ ಸುದ್ದಿಗಳು ಕೆನಡಾದಲ್ಲಿ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಗೆ ಗೀತ ನಮನ: ವಿಜಯ್ ಪ್ರಕಾಶ್, ರಾಜೇಶ್...

ಕೆನಡಾದಲ್ಲಿ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಗೆ ಗೀತ ನಮನ: ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಡಿಗೆ ಹುಚ್ಚೆದ್ದು ಕುಣಿದ ಪ್ರೇಕ್ಷಕರು

ಬೆಂಗಳೂರು; ಮೈಸೂರು ಸ್ಟುಡಿಯೋ ಹೌಸ್ ನಿಂದ ಕೆನಡಾದಲ್ಲಿ ಇತ್ತೀಚೆಗೆ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಗೆ ಗೀತ ನಮನ ಸಲ್ಲಿಸುವ ವೈಭವದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೆ ಕನ್ನಡಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು.

ನಾಡಿನ ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ಅವರ ಗೀತೆಗಳು ಪ್ರೇಕ್ಷಕರನ್ನು ರಂಜಿಸಿ ಮಂತ್ರಮುಗ್ದಗೊಳಿಸಿದವು. ವಿಜಯ್ ಪ್ರಕಾಶ್ ಅವರು ತಮ್ಮ ಸುಮಧುರ ಕಂಠದಿಂದ ಪುನೀತ್ ರಾಜ್‌ಕುಮಾರ್ ಅವರ ‘ಬೊಂಬೆ ಹೇಳುತೈತೆ’ ಹಾಡಿನ ಮೂಲಕ ಗೌರವ ಸಲ್ಲಿಸಿದ್ದು ಅವಿಸ್ಮರಣೀಯವಾಗಿತ್ತು.

ಗೀತ ಗಾಯನದ ಆರಂಭದಿಂದ ಕೊನೆಯವರೆಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದರು. ರಾಜೇಶ್ ಕೃಷ್ಣನ್ ಅವರು ಎಸ್‌ಪಿ ಬಾಲಸುಬ್ರಮಣ್ಯಂ ಅವರ ಹಾಡುಗಳನ್ನು ಹಾಡಿದರು. ಕೊನೆಗೆ ತಪಾಂಗುಚಿ, ಪಾರ್ಟಿ ವಿಭಾಗದಲ್ಲಿ ಒಟ್ಟಿಗೆ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು.

ಲೆಜೆಂಡರಿ ಡ್ರಮ್ಮರ್ ಕರ್ನಾಟಕದ ಹೆಮ್ಮೆಯ ಅರುಣ್ ಕುಮಾರ್ ಮತ್ತು ಇನ್ನೊಬ್ಬ ಪ್ರಸಿದ್ಧ ಬಾಸ್ ಗಿಟಾರ್ ವಾದಕ ಕೀತ್ ಪೀಟರ್ಸ್ ಅವರ ಕೈ ಚಳಕ ಪ್ರೇಕ್ಷಕರನ್ನು ಮೋಡಿ ಮಾಡಿತು.

ಮೈ ಕುಣಿಸುವ, ಮನ ತಣಿಸುವ ಗೀತೆಗಳಿಗೆ ಮನಸೋತ ಪ್ರೇಕ್ಷಕರು ಕಾರ್ಯಕ್ರಮ ಮುಗಿದ ನಂತರವೂ ಸಭಾಂಗಣದಿಂದ ಹೊರಬರಲು ಸಿದ್ಧರಿರಲಿಲ್ಲ. ‘ಒನ್ಸ್ ಮೋರ್ ಒನ್ಸ್ ಮೋರ್’ ಎಂಬ ಘೋಷಣೆಗಳನ್ನು ಮೊಳಗಿಸಿದರು. ಪ್ರೇಕ್ಷಕರ ಅಮಿತೋತ್ಸಾಹ ಕಂಡು ಗಾಯಕರು ಕೂಡ ನಿಬ್ಬೆರಗಾದರು.

Join Whatsapp
Exit mobile version