Home ಜಾಲತಾಣದಿಂದ ಆರೋಪಿಯನ್ನು ಹುಡುಕುತ್ತಾ ಅರಣ್ಯಕ್ಕೆ ತೆರಳಿದ್ದ ಪೊಲೀಸರು ನಾಪತ್ತೆ!

ಆರೋಪಿಯನ್ನು ಹುಡುಕುತ್ತಾ ಅರಣ್ಯಕ್ಕೆ ತೆರಳಿದ್ದ ಪೊಲೀಸರು ನಾಪತ್ತೆ!

ಪತ್ತನಂತಿಟ್ಟ | ಆರೋಪಿಯನ್ನು ಹುಡುಕುತ್ತಾ ಅರಣ್ಯಕ್ಕೆ ತೆರಳಿದ್ದ ಪೊಲೀಸರ ತಂಡ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

ರಾನ್ನಿ ಡಿವೈಎಸ್ಪಿ ಸಂತೋಷ್ ಕುಮಾರ್, ಪಂಪ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಎಂಟು ಮಂದಿ ಪೊಲೀಸರು ವಂಡಿಪೆರಿಯಾರ್ ಅರಣ್ಯದಲ್ಲಿ ಸಿಲುಕಿದ್ದಾರೆ.
ಶನಿವಾರ ಮಧ್ಯಾಹ್ನ ಎಂಟು ಮಂದಿ ಪೊಲೀಸ್ ತಂಡ ಆರೋಪಿಯೊಬ್ಬನ ಜಾಡು ಹಿಡಿದು ಅರಣ್ಯಕ್ಕೆ ತೆರಳಿದ್ದರು.

ಸ್ಥಳೀಯರು, ವಂಡಿಪೆರಿಯಾರ್ ಹಾಗೂ ಕುಮಳಿ ಪೊಲೀಸರು, ಅರಣ್ಯ ರಕ್ಷಕರು ಮತ್ತು ಅಗ್ನಿಶಾಮಕ ದಳದವರು ಹುಡುಕಾಟ ಮುಂದುವರೆಸಿದ್ದಾರೆ.

Join Whatsapp
Exit mobile version