Home ಕರಾವಳಿ ಬೈಕ್ ಗೆ ಅಡ್ಡಬಂದ ನವಿಲು:ನಿಯಂತ್ರಣ ತಪ್ಪಿ ಸವಾರ ಮೃತ್ಯು, ನವಿಲು ಕೂಡ ಸಾವು

ಬೈಕ್ ಗೆ ಅಡ್ಡಬಂದ ನವಿಲು:ನಿಯಂತ್ರಣ ತಪ್ಪಿ ಸವಾರ ಮೃತ್ಯು, ನವಿಲು ಕೂಡ ಸಾವು

ಉಡುಪಿ: ದ್ವಿಚಕ್ರ ವಾಹನ ವಾಹನವೊಂದು ನವಿಲಿಗೆ ಡಿಕ್ಕಿಯಾದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಬಡಿದು ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಎರ್ಮಾಳ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. ಗಾಯಗೊಂಡಿದ್ದ ನವಿಲು ಕೂಡ ಸ್ಥಳದಲ್ಲೇ ಸಾವನ್ನಪ್ಪಿದೆ.
ಬೆಳಪು ಗ್ರಾಮದ ಅಬ್ದುಲ್ಲಾ (24) ಮೃತ ಯುವಕ.

ಕಾಪು ತಾಲೂಕಿನ ಬೆಳಪು ಗ್ರಾಮದಿಂದ ಪಡುಬಿದ್ರೆಯ ಕಡೆಗೆ ಹೋಗುತ್ತಿದ್ದರು. ಈ ಸಂದರ್ಭ ಹೆದ್ದಾರಿಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ನವಿಲೊಂದು ಹಾರಿ ದಾಟಲು ಪ್ರಯತ್ನಿಸಿದೆ. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಅಬ್ದುಲ್ಲಾ ತಲೆಗೆ ಬಡಿದಿದೆ.

ದ್ವಿಚಕ್ರವಾಹನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ನವಿಲು ಕೂಡ ಸಾವನ್ನಪ್ಪಿದೆ. ಅಬ್ದುಲ್ಲಾ ಅವರು ಈ ಹಿಂದೆ ಮುಂಬೈಯಲ್ಲಿದ್ದರು. ಇತ್ತೀಚೆಗೆ ಅವರು ಮೂಳೂರಿನ ಪಯ್ಯಾರ್ ಎಂಬಲ್ಲಿ ಮನೆ ಮಾಡಿ ತಾಯಿಯೊಂದಿಗೆ ನೆಲೆಸಿದ್ದಾರೆ. ಮುಳೂರ್ ಅಲ್ ಇಹ್ಸಾಲ್ ಸಂಸ್ಥೆಯಲ್ಲಿ ಎರಡು ವರ್ಷಗಳ ಕಾಲ ಹಿಫ್ ಲ್ ಕಲಿತಿದ್ದರು.
ಪಡುಬಿದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ಅಬ್ದುಲ್ಲಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version