Home ಟಾಪ್ ಸುದ್ದಿಗಳು ಪರೇಶ್ ಮೇಸ್ತ ಪ್ರಕರಣ| ಬಿಜೆಪಿಗರೇ ಜನರೆದುರು ಕ್ಷಮೆ ಕೇಳುವ ಮುಖ ಇದ್ಯಾ: ಬಿ.ಕೆ.ಹರಿಪ್ರಸಾದ್

ಪರೇಶ್ ಮೇಸ್ತ ಪ್ರಕರಣ| ಬಿಜೆಪಿಗರೇ ಜನರೆದುರು ಕ್ಷಮೆ ಕೇಳುವ ಮುಖ ಇದ್ಯಾ: ಬಿ.ಕೆ.ಹರಿಪ್ರಸಾದ್

ಬೆಂಗಳೂರು: ಪರೇಶ್ ಮೇಸ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈ ಪರಚಿ, ಬೀದಿಯಲ್ಲಿ ಅರಚಿ, ರಂಪಾಟ-ರಾದ್ದಾಂತ ಮಾಡಿ ಸ್ವಾರ್ಥ ಅಧಿಕಾರದ ಬೇಳೆ ಬೇಯಿಸಿಕೊಂಡ ಬಿಜೆಪಿಗರೇ ಜನರೆದುರು ಕ್ಷಮೆ ಕೇಳುವ ಮುಖ ಇದ್ಯಾ ಎಂದು ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಡಿಕೆ ರವಿ ಕೊಲೆ ಪ್ರಕರಣದ ಸಮಯದಲ್ಲಿ ಬಿಜೆಪಿ ಗದ್ದಲವೆಬ್ಬಿಸಿತ್ತು. ಆದರೆ ನಂತರ ಅದೊಂದು ಆತ್ಮಹತ್ಯೆಯೆಂದು CBI ವರದಿ ಸಲ್ಲಿಸಿತ್ತು, ಅದೇರೀತಿ ತೀರ್ಥಹಳ್ಳಿ ನಂದಿತಾ ಕೊಲೆ ಪ್ರಕರಣದಲ್ಲಿಯೂ ಕೂಡ ಬಿಜೆಪಿ ಹಲವರ ವಿರುದ್ಧ ಆರೋಪಿಸಿ ಗಲಭೆ ಸೃಷ್ಟಿಸಿತ್ತು, ಆಗಲೂ ಸಹ  ಇದೊಂದು ಆತ್ಮಹತ್ಯೆಯೆಂದು CID ವರದಿ ಮಾಡಿತ್ತು. ಈಗ ಪರೇಶ್ ಮೆಸ್ತಾ ಪ್ರಕರಣದಲ್ಲಿಯೂ ಬಿಜೆಪಿ ಇತರರ ವಿರುದ್ಧ ಸುಳ್ಳು ಆರೋಪ ಮಾಡಿತ್ತು. ಇದೀಗ ಇದು ಕೊಲೆಯಲ್ಲ ಆಕಸ್ಮಿಕ ಸಾವು ಎಂದು CBI ವರದಿ ಮಾಡಿದೆ, ಈ ರೀತಿ ಮೈ ಪರಚಿ, ಬೀದಿಯಲ್ಲಿ ಅರಚಿ, ರಂಪಾಟ-ರಾದ್ದಾಂತ ಮಾಡಿ ಸ್ವಾರ್ಥ ಅಧಿಕಾರದ ಬೇಳೆ ಬೆಳೆಸಿಕೊಂಡ ಬಿಜೆಪಿಗರೇ ಜನರೆದರು ಕ್ಷಮೆ ಕೇಳುವ ಮುಖ ಇದ್ಯಾ? ಎಂದು ಪ್ರಶ್ನಿಸಿದ್ದಾರೆ.

Join Whatsapp
Exit mobile version