Home ಟಾಪ್ ಸುದ್ದಿಗಳು ಕಳ್ಳತನದ ಆರೋಪ ಹೊರಿಸಿ ಮುಸ್ಲಿಮ್ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ, ವಿದ್ಯುತ್ ಶಾಕ್ ನೀಡಿ ಕೊಂದು...

ಕಳ್ಳತನದ ಆರೋಪ ಹೊರಿಸಿ ಮುಸ್ಲಿಮ್ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ, ವಿದ್ಯುತ್ ಶಾಕ್ ನೀಡಿ ಕೊಂದು ಹಾಕಿದ ಮತಾಂಧರ ಪಡೆ!

ಜಾರ್ಖಂಡ್ : ರಾಂಚಿಯ ಅಂಗಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮುಬಾರಕ್ ಎಂಬ ಮುಸ್ಲಿಂ ಯುವಕನನ್ನು ಗುಂಪೊಂದು ಕಂಬಕ್ಕೆ ಕಟ್ಟಿಹಾಕಿ ಥಳಿಸಿ ಕೊಂದ ಅಮಾನವೀಯ ಘಟನೆಯೊಂದು ವರದಿಯಾಗಿದೆ.

ಪಲ್ಸರ್ ಬೈಕಿನ ಬ್ಯಾಟರಿ ಕದ್ದಿದ್ದಾನೆ ಎಂಬ ಆರೋಪದಲ್ಲಿ ಸಿರ್ಕಾ ಗ್ರಾಮದ ಬಲ ಪಂಥೀಯ ಗುಂಪೊಂದು ಸಾರ್ವಜನಿಕವಾಗಿ ಕಂಬಕ್ಕೆ ಕಟ್ಟಿಹಾಕಿ ವಿದ್ಯುತ್ ಶಾಕ್ ಕೊಟ್ಟು ಕೊಂದು ಹಾಕಿದೆ ಎನ್ನಲಾಗಿದೆ.

ಮುಬಾರಕ್ ಒಳ್ಳೆಯ ಗುಣ ನಡತೆಯ ಯುವಕ. ಆತನನ್ನು ಬೈಕ್ ಬ್ಯಾಟರಿ ಕದ್ದಿದ್ದಾನೆಂದು ಆರೋಪಿಸಿ ಬಲಪಂಥೀಯ ಗುಂಪೊಂದು ಕೊಂದು ಹಾಕಿದೆ ಎಂದು ಸ್ಥಳೀಯರ ಹೇಳಿಕೆ. ಪೊಲೀಸ್ ಇಲಾಖೆ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದೆ. ಈ ಘಟನೆಗೆ ಸಂಬಂಧಿಸಿ 11 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ರಾಂಚಿ ಎಸ್ಪಿ ನೌಶಾದ್ ಆಲಂ ತಿಳಿಸಿದ್ದಾರೆ.

Join Whatsapp
Exit mobile version