ಶಾಸಕ ಹರೀಶ್ ಪೂಂಜಾಗೆ ಬೆದರಿಕೆ ಆರೋಪ: ಬಂಧಿತ ರಿಯಾಝ್‍ಗೆ ಜಾಮೀನು

Prasthutha|


ಬಂಟ್ವಾಳ: ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಬೆನ್ನಟ್ಟಿ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ರಿಯಾಝ್ ಗೆ ಜಾಮೀನು ಮಂಜೂರು ಆಗಿದೆ.

- Advertisement -

ಪ್ರಕರಣದ ಆರೋಪಿ ಪಳ್ನೀರ್ ನಿವಾಸಿ ರಿಯಾಝ್‍ಗೆ ಬಂಟ್ವಾಳ ಪ್ರಥಮ ದರ್ಜೆ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ತನಿಖೆ ಮುಂದುವರಿದಿದ್ದು ಆರೋಪಿ ರಿಯಾಝ್ ನಿವಾಸದಲ್ಲಿ ಶೋಧ ನಡೆಸಲಾಗಿದೆ. ಆರೋಪಿಯಿಂದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಘಟನೆಯ ವೇಳೆ ಆರೋಪಿ ಬಳಸಿದ ಸ್ಕಾರ್ಪಿಯೊ ಕಾರಿನಿಂದ ಒಂದು ‘ಸ್ಪ್ಯಾನರ್ ರಾಡ್ ಫ್ರೆಂಚ್’ (ವಾಹನದಲ್ಲಿ ಬಳಸುವ ಉಪಕರಣ) ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version