Home ಟಾಪ್ ಸುದ್ದಿಗಳು ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಕಪ್ಪು ಬಣ್ಣ ಎರಚಿದ ದುಷ್ಕರ್ಮಿಗಳು: ದೂರು ದಾಖಲು

ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಕಪ್ಪು ಬಣ್ಣ ಎರಚಿದ ದುಷ್ಕರ್ಮಿಗಳು: ದೂರು ದಾಖಲು

ಕುಷ್ಟಗಿ: ಇಲ್ಲಿನ ಶಹೀದ್ ಹಝ್ರತ್ ಟಿಪ್ಪು ಸುಲ್ತಾನ್ ರವರ ವೃತ್ತದ ಬೋರ್ಡ್ ಗೆ ದುಷ್ಕರ್ಮಿಗಳು ಕಪ್ಪು ಬಣ್ಣ ಬಳಿದು ಅವಮಾನ ಮಾಡಿದ ಘಟನೆ ದೋಟಿಹಾಳ ಗ್ರಾಮದ ಮುದೇನೂರ ಕ್ರಾಸ್ ಬಳಿ ನಡೆದಿದ್ದು, ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಹೀದ್ ಹಝ್ರತ್ ಟಿಪ್ಪು ಸುಲ್ತಾನ್ ಸಂಘಟನೆಯ ವತಿಯಿಂದ 2013ರಲ್ಲಿ ಈ ವೃತ್ತವನ್ನು ನಿರ್ಮಿಸಿ ಮೂರು ಕಡೆ ಟಿಪ್ಪು ಸುಲ್ತಾನ್ ಎಂದು ಬರೆಸಲಾಗಿತ್ತು. ವೃತ್ತ ಸ್ಥಾಪಿಸಿದಾಗಿನಿಂದ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಮಾರ್ಚ್ 24ರ ರಾತ್ರಿ ದುಷ್ಕರ್ಮಿಗಳು ಒಂದು ಕಡೆಯ ಭಾವಚಿತ್ರಕ್ಕೆ ದ್ವೇಷದಿಂದ ಕಪ್ಪು ಬಣ್ಣ ಬಳಿದು ಅವಮಾನ ಮಾಡಿದ್ದಾರೆ. ಈ ಮೂಲಕ ಪ್ರದೇಶದಲ್ಲಿ ಕೋಮು ಗಲಭೆಗೆ ಸಂಚು ರೂಪಿಸಿದ್ದಾರೆ. ಆದ್ದರಿಂದ ಬಣ್ಣ ಬಳಿದ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ಮುಹಮ್ಮದ್ ರಫಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

Join Whatsapp
Exit mobile version