Home ಟಾಪ್ ಸುದ್ದಿಗಳು ದೇಶದಲ್ಲಿ ಮಧ್ಯಮ ವರ್ಗ ನಾಪತ್ತೆ: ಪಿ.ಚಿದಂಬರಂ

ದೇಶದಲ್ಲಿ ಮಧ್ಯಮ ವರ್ಗ ನಾಪತ್ತೆ: ಪಿ.ಚಿದಂಬರಂ

ನವದೆಹಲಿ: ಮಧ್ಯಮ ವರ್ಗದ ನಾಯಕರು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಅಪಾರ ಶಕ್ತಿಯುತ ಜನ ಬೆಂಬಲ ಪಡೆದು ಬಲಪಡಿಸಿದರು. ಭಾರತವು ಎಲ್ಲ ನಿಟ್ಟಿನಲ್ಲೂ ಸ್ವತಂತ್ರ್ಯವಾಗಿ  ಅಭಿವೃದ್ಧಿಯಾಗಬೇಕು ಎಂದು ಅವರು ಬಯಸಿದ್ದರು. ಆದರೆ ಇಂದು ಅಂಥ ಮಧ್ಯಮ ವರ್ಗವೇ ಕಾಣಿಸುತ್ತಿಲ್ಲ ಎಂದು ರಾಜ್ಯ ಸಭೆ ಸದಸ್ಯ ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.

ಬೆಲೆಯೇರಿಕೆ, ಮಿತಿ ಮೀರಿದ ತೆರಿಗೆ, ಅತಿಯಾದ ನಿರುದ್ಯೋಗ, ಕೋವಿಡ್ ಕಾರಣಕ್ಕೆ 2020ರಲ್ಲಿ ನಡೆದ ವಲಸೆ ಇವುಗಳಲ್ಲಿ ಮಧ್ಯಮ ವರ್ಗದವರು ಕಳೆದು ಹೋಗಿದ್ದಾರೆ. ಸುಳ್ಳು ಸುದ್ದಿಗಳು, ದ್ವೇಷ ಭಾಷಣಗಳು, ಮಾನವ ಹಕ್ಕುಗಳ ದಮನ, ಅನಗತ್ಯದ ಪೊಲೀಸ್ ಮತ್ತು ತನಿಖಾ ಸಂಸ್ಥೆಗಳ ವಿಚಾರಣೆ, ಸಂವಿಧಾನದ ಅವಗಣನೆ, ಭಾವನಾತ್ಮಕ ವಿಷಯಗಳಿಗೆ ಮಹತ್ವ, ಜೀವನಾವಶ್ಯಕ ವಿಷಯಗಳ ಬಚ್ಚಿಡುವಿಕೆ ಇವೆಲ್ಲ ಭಾರತದ ಮಧ್ಯಮ ವರ್ಗವನ್ನು ಅದರಲ್ಲೇ ಕಳೆದು ಹೋಗುವಂತೆ ಮಾಡಿದೆ ಎಂದು ಚಿದಂಬರಂ ಹೇಳಿದ್ದಾರೆ.

Join Whatsapp
Exit mobile version