Home ಟಾಪ್ ಸುದ್ದಿಗಳು ಕಳ್ಳನೆಂದು ಆರೋಪಿಸಿ ವ್ಯಕ್ತಿಯ ಗುಂಪು ಹತ್ಯೆ: ನಾಲ್ವರ ಬಂಧನ

ಕಳ್ಳನೆಂದು ಆರೋಪಿಸಿ ವ್ಯಕ್ತಿಯ ಗುಂಪು ಹತ್ಯೆ: ನಾಲ್ವರ ಬಂಧನ

ಗಿರಿದಿಹ್: ಕಳ್ಳನೆಂದು ಆರೋಪಿಸಿ ವ್ಯಕ್ತಿಯೊಬ್ಬನನ್ನು ಗುಂಪು ಹತ್ಯೆ ಮಾಡಿರುವ ಘಟನೆ ಜಾರ್ಖಂಡ್ ನ ಗಿರಿದಿಹ್ ಜಿಲ್ಲೆಯ ಖೇಟ್ಕೊ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿದಿಹ್ ಪೊಲೀಸ್ ಅಧೀಕ್ಷಕ ಅಮಿತ್ ರೇಣು ಅವರ ನಿರ್ದೇಶನದಂತೆ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.


ಕಳ್ಳರು ಎಂದು ಶಂಕಿಸಲಾದ ಮೂವರು ಗುರುವಾರ ಹಳ್ಳಿಗೆ ಪ್ರವೇಶಿಸಿದ್ದಾರೆ, ಆದರೆ ಅವರಲ್ಲಿ ಇಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಗೋದಾರ್ ಪೊಲೀಸ್ ಠಾಣೆ ಉಸ್ತುವಾರಿ ಸರೋಜ್ ಕುಮಾರ್ ಚೌಧರಿ ತಿಳಿಸಿದ್ದಾರೆ.


ಮೃತ ವ್ಯಕ್ತಿಯನ್ನು ಇನ್ನೂ ಯಾರೆಂದು ಗುರುತಿಸಲು ಸಾಧ್ಯವಾಗಲಿಲ್ಲ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Join Whatsapp
Exit mobile version