Home ಕರಾವಳಿ ಮಂಗಳೂರು| ಮಳಲಿ ಮಸೀದಿಯನ್ನು‌ ದೇವಸ್ಥಾನಕ್ಕೆ ಬಿಟ್ಟು ಕೊಡಲಿ: ಕಲ್ಲಡ್ಕ ಭಟ್ ವಿವಾದಾತ್ಮಕ ಹೇಳಿಕೆ

ಮಂಗಳೂರು| ಮಳಲಿ ಮಸೀದಿಯನ್ನು‌ ದೇವಸ್ಥಾನಕ್ಕೆ ಬಿಟ್ಟು ಕೊಡಲಿ: ಕಲ್ಲಡ್ಕ ಭಟ್ ವಿವಾದಾತ್ಮಕ ಹೇಳಿಕೆ

ಅಯೋಧ್ಯೆಯಂತೆ ಮಸೀದಿ ಬೇರೆಡೆ ನಿರ್ಮಾಣವಾಗಲಿ ಎಂದ ಆರ್‌ಎಸ್‌ಎಸ್‌ ಮುಖಂಡ

ಮಂಗಳೂರು: ಮಳಲಿಯ ಮಸೀದಿ ವಿಚಾರವಾಗಿ ಸಂಘ ಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೊಸದೊಂದು ವಿವಾದಕ್ಕೆ ಮುನ್ನುಡಿ ಹಾಕಿದ್ದಾರೆ. ಮಸೀದಿಯಿರುವ ಜಾಗವನ್ನು ದೇವಸ್ಥಾನಕ್ಕೆ ಬಿಟ್ಟು ಕೊಟ್ಟು, ಅಯೋಧ್ಯೆಯಂತೆ ಮಸೀದಿಗೆ ಬೇರೆ ಜಾಗ ನೀಡಬೇಕು ಎಂದು ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಕಲ್ಲಡ್ಕ ಭಟ್, ಚರ್ಚ್‌, ಮಸೀದಿಗಳನ್ನು ಎಲ್ಲಿ ಬೇಕಾದರೂ ನಿರ್ಮಾಣ ಮಾಡಬಹುದು. ಆದರೆ ದೇವಸ್ಥಾನ, ದೈವಸ್ಥಾನಗಳನ್ನು  ಪ್ರಶ್ನೆ ಇಟ್ಟು ಶಾಸ್ತ್ರೋಕ್ತವಾಗಿ ನಿರ್ಮಾಣ ಮಾಡಬೇಕಾಗುತ್ತದೆ. ಮಳಲಿ ಮಸೀದಿಯ ಸ್ಥಳದಲ್ಲಿ ಇರುವ ನಿರ್ಮಾಣ ದೇವಸ್ಥಾನದ್ದು ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಅದನ್ನು ಅರೇಬಿಯಾ ಶಿಲ್ಪಕಲೆ ಎಂದರೆ ನಾವು ಒಪ್ಪಿಕೊಳ್ಳಲು ಸಿದ್ಧರಿಲ್ಲ, ಅಲ್ಲಿ ಶಿಲ್ಪಕಲೆಯೇ ಇರಲಿಲ್ಲ. ಒಂದು ಹಿಡಿ ಮಣ್ಣನ್ನೂ ಕೊಡುವುದಿಲ್ಲ ಎಂದು ಹೇಳಿದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದರು.

Join Whatsapp
Exit mobile version