Home ಕರಾವಳಿ ಮಂಗಳೂರು: ಕುರ್ನಾಡು ಮಸೀದಿ ದಾಳಿಯ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು SDPI ನಿಯೋಗದಿಂದ ಉಪ ಪೊಲೀಸ್...

ಮಂಗಳೂರು: ಕುರ್ನಾಡು ಮಸೀದಿ ದಾಳಿಯ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು SDPI ನಿಯೋಗದಿಂದ ಉಪ ಪೊಲೀಸ್ ಆಯುಕ್ತರಿಗೆ ಮನವಿ

ಮಂಗಳೂರು : ಪ್ಯಾಶಿಷ್ಟ್ ಶಕ್ತಿಗಳ ದಾಳಿಗೊಳಗಾದ ಸುಬ್ಬಗುಳಿ ಕುರ್ನಾಡು ಮಸೀದಿ ದಾಳಿಯ ಸಮಾಜಘಾತಕ ಶಕ್ತಿಗಳನ್ನು ಪತ್ತೆ ಮಾಡಿ ಅರೋಪಿಗಳಿಗೆ ಯಾವುದೇ ರಾಜಕೀಯ ಒತ್ತಡಕ್ಕೊಳಗಾಗದೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕರ್ ಕುಲಾಯಿ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ ಉಪ ಆಯುಕ್ತರಾದ ಹರಿರಾಮ್ ಶಂಕರ್ ರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಮನವಿಗೆ ಸಕಾರಾತ್ಮಕ ಸ್ಪಂದನೆ ನೀಡಿದ ಉಪ ಅಯುಕ್ತರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ನಿಯೋಗದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರ್,ಬೋಳಿಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಹನೀಪ್ ರಂತಡ್ಕ,ಎಸ್.ಡಿ.ಪಿ.ಐ. ಕೋಣಾಜೆ ಬ್ಲಾಕ್ ಅಧ್ಯಕ್ಷ ಅಶ್ರಫ್ ಮೋನು,ಎಸ್.ಡಿ.ಪಿ.ಐ. ಮುಖಂಡರಾದ ಅಝೀಝ್ ಬೋಳಿಯಾರ್ ಮತ್ತು ರಹಿಮಾನ್ ಮಠ ಉಪಸ್ಥಿತರಿದ್ದರು.

Join Whatsapp
Exit mobile version