Home ಟಾಪ್ ಸುದ್ದಿಗಳು ಮಾಜಿ ಮುಖ್ಯಮಂತ್ರಿ ಭಾಗವಹಿಸಿದ್ದ ವೇದಿಕೆಗೆ ಚಾಕುವಿನೊಂದಿಗೆ ನುಗ್ಗಿದ ದುಷ್ಕರ್ಮಿ

ಮಾಜಿ ಮುಖ್ಯಮಂತ್ರಿ ಭಾಗವಹಿಸಿದ್ದ ವೇದಿಕೆಗೆ ಚಾಕುವಿನೊಂದಿಗೆ ನುಗ್ಗಿದ ದುಷ್ಕರ್ಮಿ

ನವದೆಹಲಿ: ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಉಪಸ್ಥಿತರಿದ್ದ ಕಾರ್ಯಕ್ರಮದ ವೇದಿಕೆಗೆ ದುಷ್ಕರ್ಮಿಯೋರ್ವ ಚಾಕುವಿನೊಂದಿಗೆ ನುಗ್ಗಿ ದಾಂಧಲೆಗೈದ ಘಟನೆ ಉತ್ತರಾಖಂಡದ ಕಾಶಿಪುರದಿಂದ ವರದಿಯಾಗಿದೆ.

ಕಾಂಗ್ರೆಸ್ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ರಾವತ್ ಅವರು ಭಾಗವಹಿಸಿದ್ದರು.

ಚಾಕುವಿನೊಂದಿಗೆ ವೇದಿಕೆ ಹತ್ತಿದ ವ್ಯಕ್ತಿ ‘ಜೈ ಶ್ರೀರಾಮ್’ ಘೋಷಣೆ ಕೂಗಿ ದಾಂಧಲೆ ನಡೆಸಿದ್ದು, ತಕ್ಷಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸದ್ಯ ಆತನ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಮಾನಸಿಕ ಅಸ್ವಸ್ಥನಂತೆ ಗೋಚರಿಸಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಮೋಹನ್ ಸಿಂಗ್ ಹೇಳಿದ್ದಾರೆ.

Join Whatsapp
Exit mobile version