Home ಟಾಪ್ ಸುದ್ದಿಗಳು ಪ್ರತಿ ಬಸ್​​ ಗೆ ಆಯುಧ ಪೂಜೆ ಮಾಡಲು ಕೇವಲ 50 ರೂ. ಕೊಟ್ಟ ಸರ್ಕಾರ: KSRTC...

ಪ್ರತಿ ಬಸ್​​ ಗೆ ಆಯುಧ ಪೂಜೆ ಮಾಡಲು ಕೇವಲ 50 ರೂ. ಕೊಟ್ಟ ಸರ್ಕಾರ: KSRTC ಸಿಬ್ಬಂದಿ ಆಕ್ರೋಶ

ಬೆಂಗಳೂರು: ಪ್ರತಿ ಬಸ್ ಗೆ ಆಯುಧಪೂಜೆ ಮಾಡಲು ಸರ್ಕಾರ ಕೇವಲ 50 ರೂ. ನೀಡಿದ್ದು, ಕೆಎಸ್​ ಆರ್​ ಟಿಸಿ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

50 ರೂ.ಗೆ 4 ನಿಂಬೆಹಣ್ಣು ಕೂಡ ಬರುವುದಿಲ್ಲ. ಪ್ರತಿ ವರ್ಷ ಕೂಡ ಸರ್ಕಾರ KSRTC ಗೆ ಕಡಿಮೆ ಹಣ ನೀಡಿ ಆಯುಧ ಪೂಜೆ ಮಾಡಿ ಎಂದು ಹೇಳುತ್ತಾರೆ. ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ, ಹಾಗಿರುವಾಗ ಕೇವಲ 50 ರೂಪಾಯಿಯಲ್ಲಿ ಆಯುಧ ಪೂಜೆ ಆಚರಿಸುವುದು ಹೇಗೆ, ಅನ್ನ ಕೊಡುವ ವಾಹನಕ್ಕೆ ಸರ್ಕಾರ ಮೋಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version