Home ಟಾಪ್ ಸುದ್ದಿಗಳು ಕೊಡಗು: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ವ್ಯಕ್ತಿ ಆರ್.ಎಸ್.ಎಸ್ ಕಾರ್ಯಕರ್ತ..?

ಕೊಡಗು: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ವ್ಯಕ್ತಿ ಆರ್.ಎಸ್.ಎಸ್ ಕಾರ್ಯಕರ್ತ..?

►ಆರೋಪಿ ಕಾಂಗ್ರೆಸ್ ಕಾರ್ಯಕರ್ತ ಎಂದು ಕೊಡಗಿನ ಶಾಸಕ ರಂಜನ್ ಸುಳ್ಳು ಹೇಳಿದ್ರಾ?

ಮಡಿಕೇರಿ: ಸಿದ್ದರಾಮಯ್ಯ ಕಾರಿಗೆ ಕೊಡಗಿನ ಗುಡ್ಡೆಹೊಸೂರಿಲ್ಲಿ ಮೊಟ್ಟೆ ಎಸೆದ ಆರೋಪಿ ಸಂಪತ್ ಬಿಜೆಪಿ ಕಾರ್ಯಕರ್ತನೇ ಅಲ್ಲ, ಆತ ಕಾಂಗ್ರೆಸ್ ಕಾರ್ಯಕರ್ತ ಎಂದು, ಆರೋಪಿ ಕಾಂಗ್ರೆಸ್ ಶಾಲು ಧರಿಸಿರುವ ಫೋಟೋವನ್ನು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದರು.

ರಾಮನವಮಿ ಕಾರ್ಯಕ್ರಮದಲ್ಲಿ ಆರೋಪಿ ನನ್ನ ಜೊತೆಗೆ ತೆಗೆದ ಫೋಟೋ ಇಟ್ಟು ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂದಿದ್ದ ರಂಜನ್, ಕಾಂಗ್ರೆಸ್ ಕಾರ್ಯಕರ್ತರು ಕೂಡಾ ನನ್ನ ಜೊತೆಗೆ ಫೋಟೋ ತಕೊಳ್ತಾರೆ, ಸೆಲೆಬ್ರಿಟಿ, ಸಚಿವರು, ಶಾಸಕರ ಜೊತೆಗೆ ಸಾಧಾರಣವಾಗಿ ಫೋಟೋ ತೆಗೆಯುತ್ತಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಮರ್ಥಿಸಿದ್ದರು.

ಆದರೆ ಇದೀಗ ಆರೋಪಿಯ ವಿವಿಧ ಫೋಟೋಗಳು ವೈರಲ್ ಆಗಿದೆ. ಶಾಸಕರು ಕಾಂಕ್ರೀಟ್ ರಸ್ತೆ ಉಧ್ಘಾಟಿಸುತ್ತಿರುವ ಫೋಟೋದಲ್ಲಿ ಆರೋಪಿ ರಂಜನ್ ಜೊತೆಗಿದ್ದಾನೆ. ಮತ್ತೊಂದು ಫೋಟೋದಲ್ಲಿ ಆರ್.ಎಸ್.ಎಸ್ ಶಾಖೆಯಲ್ಲಿ ರಂಜನ್ ಜೊತೆಗೆ ಆರೋಪಿ ಇರುವ ಫೋಟೋ ವೈರಲ್ ಆಗಿದೆ. ಇದಲ್ಲದೆ ಸಂಘಪರಿವಾರ ಕಾರ್ಯಕರ್ತರ ಜೊತೆಗಿನ ಹಲವು ಫೋಟೋಗಳು ವೈರಲ್ ಆಗಿದೆ.

Join Whatsapp
Exit mobile version