Home ಟಾಪ್ ಸುದ್ದಿಗಳು ಪತಂಜಲಿ ತುಪ್ಪದಲ್ಲಿ ಕಲಬೆರಕೆ: ಅದು ಆರೋಗ್ಯಕ್ಕೆ ಹಾನಿಕರವೆಂದ FSDD

ಪತಂಜಲಿ ತುಪ್ಪದಲ್ಲಿ ಕಲಬೆರಕೆ: ಅದು ಆರೋಗ್ಯಕ್ಕೆ ಹಾನಿಕರವೆಂದ FSDD

ನವದೆಹಲಿ; ಬಾಬಾ ಗುರುದೇವ್ ನಡೆಸಿಕೊಂಡು ಬರುತ್ತಿರುವ ಪತಂಜಲಿ ಕಂಪನಿಯ ತುಪ್ಪದಲ್ಲಿ ಕಲಬೆರಕೆಯಿದೆ ಮತ್ತು ಅದು ಆರೋಗ್ಯಕ್ಕೆ ಹಾನಿಕರ ಎಂದು ಆಹಾರ ಸುರಕ್ಷೆ ಮತ್ತು ಔಷಧೀಯ ಇಲಾಖೆ ( FSDD) ತಿಳಿಸಿದೆ.

ಉತ್ತರಖಂಡದ ತೆಹ್ರಿ ಜೆಲ್ಲೆಯ ಅಂಗಡಿಯೊಂದರಲ್ಲಿ ಪತಂಜಲಿಯ ಆಕಳ ತುಪ್ಪದ ಸ್ಯಾಂಪಲನ್ನು ಪಡೆದು ರಾಜ್ಯ ಮತ್ತು ಕೇಂದ್ರೀಯ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಅದರಲ್ಲಿ ಕಲಬೆರಕೆ ಇರುವುದು ಪತ್ತೆಯಾಗಿದೆ. ಆದ್ದರಿಂದ ಇದು ಆಹಾರ ಸುರಕ್ಷಾ ಮಾನದಂಡಗಳಿಗೆ ಒಳಪಡುವುದಿಲ್ಲ ಎಂದು FSDD ತಿಳಿಸಿದೆ.

ಈ ಹಿಂದೆ 2021 ರಲ್ಲಿ ಪತಂಜಲಿ ತುಪ್ಪವು ಆರೋಗ್ಯಕ್ಕೆ ಹಾನಿಕರ ಎಂದು FSDD ಪತ್ತೆ ಹಚ್ಚಿತ್ತು. ಆದರೆ ರಾಜ್ಯ ಪ್ರಯೋಗಾಲಯದ ಫಲಿತಾಂಶವನ್ನು ರಾಮದೇವ್ ಕಂಪನಿಯು ನಿರಾಕರಿಸಿತ್ತು. ಇದು ಕಲಬೆರಕೆಯು ಕೇಂದ್ರೀಯ ಪ್ರಯೋಗಾಲಯದಲ್ಲೂ ದೃಢಪಟ್ಟಿದ್ದು ನ್ಯಾಯಾಲಯದಲ್ಲಿ ಪತಂಜಲಿ ವಿರುದ್ಧ ಮೊಕದ್ದಮೆ ದಾಖಲಿಸಿದೆ.

Join Whatsapp
Exit mobile version