Home Uncategorized ಹಿಜಾಬ್ ತೀರ್ಪು : ಕರ್ನಾಟಕ ಬಂದ್ ಗೆ ಕೊಡಗು ಮುಸ್ಲಿಂ ಜಮಾಅತ್’ಗಳ ಒಕ್ಕೂಟ ಬೆಂಬಲ

ಹಿಜಾಬ್ ತೀರ್ಪು : ಕರ್ನಾಟಕ ಬಂದ್ ಗೆ ಕೊಡಗು ಮುಸ್ಲಿಂ ಜಮಾಅತ್’ಗಳ ಒಕ್ಕೂಟ ಬೆಂಬಲ

ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲವೆಂದು ತಿರ್ಪಿತ್ತಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಅಮೀರ್ ಎ ಶರಿಯತ್ ಮುಖ್ಯಸ್ಥರಾದ ಮೌಲಾನಾ ಸಗೀರ್ ಅಹಮದ್ ರವರು ಕರೆ ನೀಡಿರುವ ನಾಳಿನ ಶಾಂತಿಯುತ ಕರ್ನಾಟಕ ಬಂದ್ ಗೆ ಕೊಡಗು ಮುಸ್ಲಿಂ ಜಮಾಅತ್’ಗಳ ಒಕ್ಕೂಟ ಸಂಪೂರ್ಣ ಬೆಂಬಲವನ್ನು ಘೋಷಿಸಲಿದೆ ಎಂದು ಸಂಘಟನೆ ತಿಳಿಸಿದೆ.

ತೀರ್ಪು ಸಾಂವಿಧಾನಿಕ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಶಿಕ್ಷಣ ಹಕ್ಕುಗಳನ್ನು ಕಸಿದು ಕೊಳ್ಳುವ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಈ ನಿಟ್ಟಿನಲ್ಲಿ ಕೊಡಗು ಪರಿಸರದಲ್ಲಿ ಸ್ವಯಂ ಪ್ರೇರಿತ ಶಾಂತಿಯುತವಾಗಿ ವ್ಯವಹಾರ ಸ್ಥಗಿತ ಮಾಡಬೇಕಾಗಿ ವಿನಂತಿಸುತ್ತೇವೆ. ಈ ವ್ಯವಹಾರ ಸ್ಥಗಿತ ಶಾಂತಿಯುತವಾಗಿರುತ್ತದೆ. ಕಾನೂನು,  ಶಾಂತಿ ಸುವ್ಯವಸ್ಥೆ ಪಾಲನೆಗೆ ಪೂರಕವಾಗಿರಲಿ ಎಂದು ಸಂಘಟನೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Join Whatsapp
Exit mobile version